⚫ ಪ್ರಾಗೈತಿಹಾಸ ಕಾಲದ ಹಂತಗಳು-Prehistoric Ages



1) ಹಳೆಯ ಶಿಲಾಯುಗ : 'ಕ್ವಾರ್ಟಝಾಯಿಟ್ಮೆನ್'

ಸಾಮಾನ್ಯವಾಗಿ ಯುಗದ ಕಾವನ್ನು 5 ಲಕ್ಷ ವರ್ಷಗಳಿಂದ 12 ಸಾವಿರ ವರ್ಷಗಳವರೆಗೆ ಗುರುತಿಸಲಾಗುತ್ತದೆ.

* ಇಂಗ್ಲೀಷ್ನಲ್ಲಿ ಪ್ಯಾಲಿಯೋಲಿಥಿಕ್ ಏಜ್ * ಯುಗವು ಸಾ..ಪೂ 40,000 ದಿಂದ 10,000 ವರೆಗಿತ್ತು.

* ಮಾನವರ ಇತಿಹಾಸದ ಆರಂಭಿಕ ಪುರಾತತ್ವಿಕ (Archaeological) A, * ಹಣ್ಣು, ಹಂಪಲು, ಗೆಡ್ಡೆ ಗೆಣಸುಗಳ ಸೇವನೆ * ಅಲೆಮಾರಿಗಳು * ಗವಿಗಳಲ್ಲಿ, ಕಲ್ಲಾಸರೆಗಳಲ್ಲಿ ವಾಸ * ಬೆಣಚುಕಲ್ಲುಗಳಿಂದ ಹೆರೆಚಕ್ಕೆ, ಚಾಕು, ಕಲ್ಲುಳಿ, ಮೊನೆ ಮುಂತಾದ ದೊಡ್ಡ ದೊಡ್ಡ ಶಿಲಾ ಉಪಕರಣಗಳ ತಯಾರಿಕೆ * ಒರಟು ಮತ್ತು ಅಲಂಕರಿಸದ ಕಲ್ಲುಗಳನ್ನು ಕಟ್ಟಿಗೆ ಅಥವಾ ಎಲುಬಿನ ಹಿಡಿಕೆ ಬಳಸಿ ಉಪಯೋಗಿಸುತ್ತಿದ್ದರು. ಕಾಲದ ಜನರುಕ್ವಾರ್ಟಜೈಟ್ ಎಂಬ ಅತ್ಯಂತ ಗಡುಸಾದ ಕಲ್ಲನ್ನು ಬಳಸುತ್ತಿದ್ದುದರಿಂದ ಇವರನ್ನು 'ಕ್ವಾರ್ಟಝಾಯಿಟ್ಮೆನ್' ಎಂದು ಕರೆಯುತ್ತಾರೆ* ಹೊದಿಕೆಗಳಾಗಿ ಮರದ ಎಲೆ ಮತ್ತು ತೊಗಟೆಗಳ ಬಳಕೆ * ಯುಗದ ಕೊನೆಯ ಘಟ್ಟದಲ್ಲಿ ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಮೀನು ಹಿಡಿಯುವುದನ್ನು ಕಲಿತರು * ಮೊದಲ ಬಾರಿಗೆ ಬೆಂಕಿಯ ಪರಿಚಯ * ಇವರು ನಿಗ್ರೋ ಜನಾಂಗಕ್ಕೆ ಸೇರಿದವರಾಗಿದ್ದರೆಂದು ನಂಬಲಾಗಿದೆ. * ಕಡಿಮೆ ಎತ್ತರ, ಕಪ್ಪು ಚರ್ಮ, ಒರಟು ಕೂದಲು ಮತ್ತು ಚಪ್ಪಟೆ ಮೂಗು. ಹೊಂದಿದ್ದರು.

* ಪ್ರಮುಖ ನೆಲೆಗಳೆಂದರೆ - ಮಧ್ಯಪ್ರದೇಶದ ಬೇಲಾನ್ ಕಣಿವೆ ಮತ್ತು ಛೋಟಾನಾಗ್ಪುರ ಪ್ರದೇಶಗಳು * ಕರ್ನಾಟಕದ ಹುಣಸಗಿ ಮತ್ತು ಬೈಚ್‌ಬಾಳ್ ಪ್ರದೇಶ, ಬೆಳಗಾವಿ ಜಿಲ್ಲೆಯ ಘಟಪ್ರಭಾ ಕಣಿವೆ, ರಾಯಚೂರು ಜಿಲ್ಲೆಯ ಲಿಂಗಸಗೂರುಗಳು * ಆಂಧ್ರ ಪ್ರದೇಶದ ಕರ್ನೂಲ್ ಮತ್ತು ಅಮರಾವತಿ * ತಮಿಳುನಾಡಿನ ಅತ್ತಿರಾಮ್‌ಪಕ್ಕಂ,ತಿರುನೆಲ್‌ವೇಲಿ * ಈಗಿನ ಪಾಕಿಸ್ತಾನದ ಸೋಹನ್ ನದಿ ಕಣಿವೆ, ನರ್ಮದಾ, ತುಂಗಭದ್ರಾ ಕಣಿವೆಗಳು, ಉತ್ತರಪ್ರದೇಶದ ಬೇಲಾನ ಗುಹೆಗಳು-ಕರ್ನಾಟಕದ ಭಾರತದಲ್ಲಿಯ ಹಳೆಯ ಶಿಲಾಯುಗದ ತಾಣಗಳಾಗಿವೆ.


2) ಮಧ್ಯ ಶಿಲಾಯುಗ (Misolithic Age) / ಸೂಕ್ಷ್ಮ ಶಿಲಾಯುಗ :

* ಗ್ರೀಕ್ ಭಾಷೆಯಲ್ಲಿ ;ಮಿಸೋ’ ಎಂದರೆ ಮಧ್ಯ, ‘ಲಿಥಿಕ್ ಎಂದರೆ ಶಿಲೆ. ಮಿಸೋಲಿಥಿಕ್ ಏಜ್ ಎಂದರೆ ಮಧ್ಯ ಶಿಲಾಯುಗ ಎಂದಾಗುತ್ತದೆ. ಯುಗವು ಹಳೆ ಮತ್ತು ಹೊಸ ಶಿಲಾಯುಗದ ಮಧ್ಯದಲ್ಲಿ ಬರುತ್ತದೆ. ಸಾಮಾನ್ಯವಾಗಿ ಸಾ..ಪೂ 10,000 ದಿಂದ 8000 ಮಧ್ಯದಲ್ಲಿ ಇತ್ತೆಂದು ಒಪ್ಪಲಾಗಿದೆ. * ಇದು ಹಳೆಯ ಮತ್ತು ನವಶಿಲಾಯುದ ನಡುವಿನ ಸ್ಥಿತ್ಯಂತರ ಕಾಲ. * ಕೌಶಲ್ಯಭರಿತ ಕಿರು ಶಿಲಾಯುಧಗಳ ಬಳಕೆ (ಅರ್ಧ ಅಂಗುಲದಿA ಒಂದು ಅಂಗುಲ)

* ಕಿರು ಆಯುಧಗಳನ್ನು ಬಾಣದ ತುದಿಗೆ ಅಥವಾ ಕಟ್ಟಿಗೆಯ ತುದಿಗೆ ಸಿಕ್ಕಿಸಿ ಭರ್ಜಿಯಂತೆ ಬಳಸಿ ಬೇಟೆ * ಆಹಾರಕ್ಕಾಗಿ ಕಾಡು ಧಾನ್ಯಗಳ ಸಂಗ್ರಹ. * ಮಧ್ಯ ಶಿಲಾಯುಗದ ಮಾನವನು ಬೇಟೆಗಾರನು, ಸಂಗ್ರಾಹಕನು ಮತ್ತು ಮೀನುಗಾರನು ಆಗಿದ್ದನು.* ಧಾನ್ಯಗಳಾಗಲಿ, ಬೇಟೆಗಳಾಗಲಿ ನಿರಂತರವಾಗಿ ದೊರಕದ ಕಾರಣ-ಬೇಟೆಯ ಸಂದರ್ಭದಲ್ಲಿ ಗಾಯಗೊಂಡು ಬದುಕುಳಿದ ಪ್ರಾಣಿಗಳು ಅಥವಾ ದೊರೆತ ಮರಿಗಳನ್ನು ತಂದು ತಮ್ಮೊಟ್ಟಿಗೆ ಸಾಕುವುದು. ಇವು ಅವರಿಗೆ ಕಾಯ್ದಿರಿಸಿದ ತುರ್ತುಕಾಲದ ಆಹಾರಗಳಾಗಿ ಬಳಕೆಯಾಗುತ್ತಿದ್ದವು. * ತಮ್ಮ ಮತ್ತು ಪಶುಗಳ ಆಹಾರಕ್ಕಾಗಿ ನಿರಂತರ ಅಲೆದಾಡುತ್ತಿದ್ದರು. * ಬಿಡುವಿನ ವೇಳೆಗಳಲ್ಲಿ ಬೀಡುಬಿಟ್ಟ ಸ್ಥಳಗಳ ಕಲ್ಲಾಸರೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದರು.

* ಮೇಲೊದಿಕೆಗಳಾಗಿ ಪ್ರಾಣಿಗಳ ಚರ್ಮ ಬಳಕೆ. * ಬೆಂಕಿಯ ಪರಿಚಯ ಚೆನ್ನಾಗಿತ್ತು* ಕಾಲದ ಪ್ರಮುಖ ನೆಲೆಗಳು-ಮಧ್ಯಪ್ರದೇಶದ ಭೀಮ್ಬೇಟ್ಕ, ಆದಮ್ಗರ್, ಕರ್ನಾಟಕದ ಬ್ರಹ್ಮಗಿರಿ, ಕನಗನಹಳ್ಳಿ,ಬಳ್ಳಾರಿ ಜಿಲ್ಲೆಯ ಸಂಗನಕಲ್ಲು,ರಾಜಸ್ಥಾನದ ಬಾಗೊರ್ & ಅಜ್ಮೀರ,ಗಣೇಶ್ವರ್, .ಬಂಗಾಳದ ಬಿರ್ಭಾನ್ಪುರ್,ಆಂಧ್ರಪ್ರದೇಶದ ವಾನ್ಪಸಾರಿ, .ಪ್ರದೇಶದ ಸರಾಯ್ ನಹರ್ ರಾಯ್, ಮಹಾದಹ, ಗುಜರಾತಿನ ಸಬರಮತಿ, ಮಹಾರಾಷ್ಟç ಅಹಮದ್ನಗರ ಮುಂತಾದವು.

3) >ನವಶಿಲಾಯುಗ(ನಿಯೋಲಿಥಿಕ್):

* ‘ನಿಯೋಲಿಥಿಕ್ ಎಂಬ ಶಬ್ದವುನಿಯೋ ಎಂದರೆ ಹೊಸÀ ಮತ್ತುಲಿಥಿಕ್ ಎಂದರೆ ಶಿಲೆ ಎಂಬ ಗ್ರೀಕ್ ಪದಗಳಿಂದ ಬಂದಿದೆ. ಆದ್ದರಿಂದ ನಿಯೋಲಿಥಿಕ್ ಎಂದರೆ ಹೊಸ ಶಿಲಾಯುಗ ಎಂದರ್ಥ. ಸಾಮಾನ್ಯವಾಗಿ ಇದು ಸಾ..ಪೂ 8000 ದಿಂದ 4000 ವರೆಗಿತ್ತೆಂದು ನಂಬಲಾಗಿದೆ.* ನವ ಶಿಲಾಯುಗ-ಸುಮಾರು 10ಸಾವಿರ ವರ್ಷಗಳ ಈಚಿನದು.

* ಯುಗದ ಮಾನವ ಉಳುಮೆಯನ್ನು ಕಲಿತ. ಆಕಳು, ಕುರಿ, ಮೇಕೆ ಮುಂತಾದ ವಿವಿಧ ಪ್ರಾಣಿಗಳನ್ನು ಸಾಕಲು ಪ್ರಾರಂಭಿಸಿದ.* ಗುಹೆಗಳಲ್ಲಿ ವಾಸಿಸುತ್ತಿದ್ದು, ಅವುಗಳನ್ನು ಚಿತ್ರಗಳಿಂದ ಮತ್ತು ಕೆತ್ತನೆಗಳಿಂದ ಶೃಂಗರಿಸುತ್ತಿದ್ದರು. ಬೇಟೆಯ ಮತ್ತು ನೃತ್ಯದ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. * ಹೊಳಪಿನಿಂದ ಕೂಡಿದ, ಹರಿತವಾದ ಅಲಗನ್ನು ಹೊಂದಿದ್ದ ಆಯುಧಗಳ ಬಳಕೆ * ಆಯುಧಗಳನ್ನು ಕೆತ್ತಿ, ಮಸೆದು, ಸಂದುಗೆರೆ ಹೊಡೆದು, ನುಣುಪುಗೊಳಿಸಲಾಗುತ್ತಿತ್ತು. * ಗಿಡ-ಮೂಲಿಕೆಯನ್ನು ಅರೆಯಲು, ದವಸ-ಧಾನ್ಯಗಳನ್ನು ಪುಡಿಮಾಡಲು-ಬೀಸುಕಲ್ಲನ್ನು ಬಳಸುತ್ತಿದ್ದರು. * ಧಾನ್ಯಗಳ ಶೇಖರಣೆಗಾಗಿ ಮತ್ತು ಅಕ್ಕಿ, ಗೋಧಿ ಹಾಗೂ ಇನ್ನಿತರ ದವಸ-ಧಾನ್ಯಗಳನ್ನು ಬೇಯಿಸಲು-ಮಡಿಕೆಗಳನ್ನು ಬಳಸಲಾಗುತ್ತಿತ್ತು. * ಬಟ್ಟೆ ನೇಯುವುದನ್ನು ಕಲಿತಿದ್ದರು. * ಮಡಕೆಗಳನ್ನು ಅಲಂಕರಿಸುತ್ತಿದ್ದರು ಮತ್ತು ಸಮುದ್ರದಲ್ಲಿ ತೇಲುವ ದೋಣಿಗಳನ್ನು ನಿರ್ಮಿಸುತ್ತಿದ್ದರು. * ಅವರಿಗೆ ನೇಕಾರಿಕೆ ತಿಳಿದಿತ್ತು.ಇವರು ತಮ್ಮ ಉಣ್ಣೆ ಮತ್ತು ಹತ್ತಿಯನ್ನು ಬಳಸಿ ಬಟ್ಟೆಗಳನ್ನು ಉತ್ಪಾದಿಸಿ ಬಳಸುತ್ತಿದ್ದರು. * ಹಣ್ಣುಗಳು, ತರಕಾರಿಗಳು, ಗೆಣಸು, ಪ್ರಾಣಿಗಳ ಮಾಂಸ, ಮೀನು, ಹೈನು, ಮುಂತಾದವು ಅವರ ಆಹಾರಗಳಾಗಿದ್ದವು. ಅಡುಗೆ ಮಾಡುವುದು ಅವರಿಗೆ ತಿಳಿದಿತ್ತು. ಇವರು ಉಂಗುರ, ಬಳೆಗಳು, ತೋಳ್ಬಂದಿಗಳು, ಮಣಿಗಳು, ಮುಂತಾದ ಆಭರಣಗಳನ್ನು ಬಳಸುತ್ತಿದ್ದರು. * ಪೂರ್ವಜರನ್ನು ಮತ್ತು ಆತ್ಮಗಳನ್ನು ಪೂಜಿಸುತ್ತಿದ್ದರು. ಸತ್ತವರನ್ನು ಸುಟ್ಟು ಬೂದಿಯನ್ನು ಸಂರಕ್ಷಿಸಿಡುತ್ತಿದ್ದರು. ನರ ಬಲಿ ಪದ್ಧತಿಯು ಆಚರಣೆಯಲ್ಲಿತ್ತು. ಉತ್ಖನನಗಳ ಸಂದರ್ಭದಲ್ಲಿ ಮಾನವರ ಅನೇಕ ತಲೆಬುರಡೆಗಳು ಪತ್ತೆಯಾಗಿವೆ. * ಉತ್ಪಾದಿಸಿದ ಧಾನ್ಯಗಳ ಸಂಗ್ರಹಕ್ಕಾಗಿ-ಮಣ್ಣಿನ ಮಡಕೆ ತಯಾರಿ. * ಹೆರೆಯುವ, ಕುಟ್ಟುವ, ಬೀಸುವ ಸಾಧನಗಳನ್ನು ಬಳಕೆ. * ಕಾಲದಲ್ಲಿಯೇ ಆರಂಭಿಕ ಹಳ್ಳಿಗಳು ಏಳಿಗೆಗೆ ಬಂದವು. * ಚಕ್ರದ ಪರಿಚಯದಿಂದ-ಗುಣಾತ್ಮಕ ಮತ್ತು ವೈವಿಧ್ಯಮಯ ಮಡಕೆಗಳ ತಯಾರಿಕೆ* ಬಳ್ಳಾರಿ ಸಮೀಪದ ಸಂಗನಕಲ್ಲು ಯುಗದ ಆಯುಧ ಉತ್ಪಾದನಾ ನೆಲೆಯಾಗಿತ್ತು.

ನವಶಿಲಾಯುಗದ ತಾಣಗಳು : ಕರ್ನಾಟಕದ ಮಸ್ಕಿ, ರಾಯಚೂರು ದೋ-ಆಬ್, ಬಳ್ಳಾರಿ ಮತ್ತು ಕಾವೇರಿ ಕಣಿವೆ ಪ್ರದೇಶಗಳು, ಬನಹಳ್ಳಿ, ಬ್ರಹ್ಮಗಿರಿ, ಬೂದಿಹಾಳ, ಹಳ್ಳೂರು, ಪಿಕ್ಲಿಹಾಳ, ಟಿ.ನರಸಿಪುರ, ಉತ್ನೂರು, ತಮಿಳುನಾಡಿನ ತಿರುನಲ್ವೇಲಿ ಮತ್ತು ಸೇಲಂ, ಆಂಧ್ರಪ್ರದೇಶದ ಕರ್ನೂಲ್ ಮತ್ತು ಹೈದರಾಬಾದ್, ಗುಜರಾತಿನ ಕಾಥೇವಾರ, ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನ, ಬಿಹಾರದ ಚಿರಾಂಡ್ಮುAತಾದವು. * ಭಾರತ ಉಪಖಂಡದಲ್ಲಿ ಕೃಷಿಯ ಆರಂಭಿಕ ಕುರುಹುಗಳು ಪಾಕಿಸ್ತಾನದ ಮೆಹರ್ಗರ್ ನೆಲೆಯಲ್ಲಿ ಕಂಡುಬAದಿದೆ-ಇಲ್ಲಿನ ಜನರು ವಾಸಕ್ಕೆ ಒಣ ಇಟ್ಟಿಗೆಗಳಿಂದ ಮನೆಗಳನ್ನು ನಿರ್ಮಿಸಿದರೆ, ಕಾಶ್ಮೀರದ ಬುರ್ಜ್ಹೋಮ್ ಪ್ರದೇಶದ ಜನರು ನೆಲದೊಳಗೆ ಗುಹೆಗಳನ್ನು ನಿರ್ಮಿಸಿಕೊಂಡಿದ್ದರು.


-> >ಲೋಹಗಳ ಯುಗ :

ಶಿಲಾಯುಗದಿಂದ ಲೋಹಯುಗದೆಡೆಗಿನ ಪರಿವರ್ತನೆಯು ನಿಧಾನ ಪ್ರಕ್ರಿಯೆಯಾಗಿತ್ತು. ಲೋಹದ ಮತ್ತು ಕಲ್ಲಿನ ಉಪಕರಣÀಗಳು ಜೊತೆಜೊತೆಯಾಗಿಯೇ ಬಳಸಲ್ಪಟ್ಟವು. ಆದರೆ ಲೋಹಗಳ ಬಳಕೆಗೆ ಸಂಬAಧಿಸಿದAತೆ ಭಾರತದ ವಿಭಿನ್ನ ಭಾಗಗಳಲ್ಲಿ ಏಕರೂಪತೆ ಇರಲಿಲ್ಲ. ಹೊಸ ಶಿಲಾಯುಗವನ್ನು ಉತ್ತರ ಭಾರತದಲ್ಲಿ ತಾಮ್ರಯುಗವು ಅನುಸರಿಸಿದರೆ, ದಕ್ಷಿಣ ಭಾರತದಲ್ಲಿ ಕಬ್ಬಿಣ ಯುಗವು ಅನುಸರಿಸಿತು. ಲೋಹ ಯುಗವನ್ನು ತಾಮ್ರ ಯುಗ, ಕಂಚಿನ ಯುಗ ಮತ್ತು ಕಬ್ಬಿಣ ಯುಗಗಳೆಂದು ವರ್ಗೀಕರಿಸಲಾಗಿದೆ.

* ನವಶಿಲಾಯುಗದ ಕೊನೆಯಲ್ಲಿ ಲೋಹಗಳ ಬಳಕೆ ಆರಂಭ.

* ಮೊದಲು ಮಾನವರು ಬಳಸಿದ ಲೋಹ ತಾಮ್ರ.

* ತಾಮ್ರಕ್ಕೆ ತವರವನ್ನು ಸೇರಿಸಿ ಕಂಚು ಉತ್ಪಾದಿಸುವುದನ್ನು ಕಲಿತರು.

* ಕಂಚು ತಾಮ್ರಕ್ಕಿಂತ ಗಡುಸಾದ ಒಂದು ಮಿಶ್ರಲೋಹ.


4) ತಾಮ್ರ ಮತ್ತು 5) ಕಂಚಿನ ಶಿಲಾಯುಗ:

* ತಾಮ್ರ ಮತ್ತು ಕಂಚಿನ ಆಯುಧಗಳ ಪ್ರಮಾಣ ಅತ್ಯಲ್ಪವಾಗಿದ್ದರಿಂದ ಅವುಗಳ ಜೊತೆಯಲ್ಲಿಯೇ ಶಿಲಾಯುಧಗಳೂ ಮುಂದುವರೆದವು. ಆದ್ದರಿಂದ ಕಾಲವನ್ನು ತಾಮ್ರ ಮತ್ತು ಕಂಚಿನ ಶಿಲಾಯುಗ ಎಂದು ಕರೆಯಲಾಗುವುದು. ಭಾರತ ಇತಿಹಾಸದಲ್ಲಿ ಕಂಚಿನ ಯುಗವೆಂಬುದು ಇಲ್ಲ. ಮೊಟ್ಟಮೊದಲು ಉಪಯೋಗಿಸಿದ ಲೋಹ ಬಂಗಾರವಾಗಿದೆ. ತಾಮ್ರವನ್ನು ವಿವಿಧ ಸಲಕರಣೆಗಳಾದ ಭರ್ಚಿ, ಖಡ್ಗ, ಕೊಡಲಿ, ಭಲ್ಲೆ, ಮುಂತಾದವುಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ಉಪಕರಣಗಳನ್ನು ಕೃಷಿ, ಮೀನುಗಾರಿಕೆ, ಯುದ್ಧ ಮತ್ತು ಬೇಟೆಯಾಡಲು ಬಳಸುತ್ತಿದ್ದರು. ತಾಮ್ರ ಯುಗವು ಹರಪ್ಪ ನಾಗರಿಕತೆಯೊಂದಿಗೆ ಸಹ ಸಂಬA ಹೊಂದುತ್ತದೆ. * ಚಕ್ರಗಳಿಂದ ಮಾಡಿದ ಅಲಂಕೃತ ಮಡಕೆಗಳು ಕಾಲದಲ್ಲಿ ಕಂಡು ಬರುತ್ತವೆ. * ಭೂಮಿಯನ್ನು ಆಳವಾಗಿ ಉಳಲು ಮತ್ತು ಅರಣ್ಯ ಕಡಿದು ಕೃಷಿ ಭೂಮಿಯಾಗಿ ಪರಿವರ್ತಿಸಲು ಕಂಚಿನ ಉಪಕರಣಗಳ ಬಳಕೆ. ಇದರಿಂದಾಗಿ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಹೆಚ್ಚಳ ಕಂಡಿತು.

* ಹೆಚ್ಚುವರಿ ಧಾನ್ಯವನ್ನು ಅಗತ್ಯವಿರುವ ಪ್ರದೇಶಗಳಿಗೆ ಕಳುಹಿಸಿಕೊಡುವ ಮೂಲಕ ವ್ಯಾಪಾರವಹಿವಾಟು ಆರಂಭವಾದವು. * ಪರಿಣಾಮವಾಗಿ ವಾಯವ್ಯ ಭಾರತದಲ್ಲಿ ಸಿಂಧೂ ಮತ್ತು ಅದರ ಉಪನದಿಗಳ ಕೊಳ್ಳದಲ್ಲಿ ಹರಪ್ಪ ನಾಗರಿಕತೆಯಂತಹ ಬೃಹತ್ ಸಂಸ್ಕೃತಿಯು ತಲೆ ಎತ್ತಲು ಸಾಧ್ಯವಾಯಿತು. ಇದನ್ನು ಮೊದಲ ನಗರೀಕರಣವೆಂದು ಇತಿಹಾಸಕಾರರು ಗುರುತಿಸುತ್ತಾರೆ. * ದಕ್ಷಿಣ ಭಾರತದಲ್ಲಿ ಕಂಚಿನ ಬಳಕೆ ಹೆಚ್ಚಾಗಿರಲಿಲ್ಲ. * ಕರ್ನಾಟಕದ ಹಳ್ಳೂರು, ಬನಹಳ್ಳಿ, ಬ್ರಹ್ಮಗಿರಿ ಮುಂತಾದ ಕಡೆಗಳಲ್ಲಿ ತಾಮ್ರ ಮತ್ತು ಕಂಚಿನ ಶಿಲಾಯುಗದ ಆಧಾರಗಳು ದೊರೆತಿವೆ.


6) >ಕಬ್ಬಿಣ ಶಿಲಾಯುಗ (ಬೃಹತ್ ಶಿಲಾ ಸಂಸ್ಕೃತಿಯ ಕಾಲ) :

ಮನುಷ್ಯ ಒಂದೇ ಸ್ಥಳದಲ್ಲಿ ವಾಸಿಸಲು ಪ್ರಾರಂಭಿಸಿದ. ಭಾರತದಲ್ಲಿ ಹಲವು ಕಂಚಿನ ಉಪಕರಣಗಳು ಮತ್ತು ವಸ್ತುಗಳು ಶೋಧಿಸಲ್ಪಟ್ಟಿವೆಯಾದರೂ ಭಾರತ ಇತಿಹಾಸದಲ್ಲಿ ಕಂಚಿನ ಯುಗವೆಂಬುದು ಇಲ್ಲ. ತಾಮ್ರ ಯುಗ ಮತ್ತು ಕಬ್ಬಿಣ ಯುಗದೊಂದಿಗೆ ನಾವು ಭಾರತದ ಇತಿಹಾಸ ಕಾಲದ ಪರಿಧಿಗೆ ಪ್ರವೇಶಿಸುತ್ತೇವೆ. ದಕ್ಷಿಣ ಭಾರತದಲ್ಲಿ ಕಬ್ಬಿಣವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. * ಕಬ್ಬಿಣವು ದಕ್ಷಿಣ ಭಾರತದಲ್ಲಿ 3500 ವರ್ಷಗಳ ಹಿಂದೆಯೇ ತಾಮ್ರಕ್ಕೂ ಮೊದಲೇ ಬಳಕೆಯಲ್ಲಿತ್ತು. * ಸಮಾಧಿಗಳಲ್ಲಿ ಶವದ ಕೋಣೆಯ ಸುತ್ತಲೂ ಕಲ್ಲುವೃತ್ತಗಳ (Stone Circle) ನಿರ್ಮಾಣ.

* ಶವದ ಕೋಣೆಗಳಲ್ಲಿ ಕಪ್ಪು ಮತ್ತು ಕೆಂಪು ವರ್ಣದ ಮಡಕೆಗಳು ( Black and Red Ware ) ಸಾಮಾನ್ಯವಾಗಿ ಕಂಡುಬರುತ್ತವೆ. * ಸಮಾಧಿಗಳನ್ನು ಕರ್ನಾಟಕದಲ್ಲಿ ಜನಸಾಮಾನ್ಯರುಪಾಂಡವರ ಗುಡಿ/ಮನೆ, ಮೌರ್ಯರ ಕಲ್ಲು ಎಂದು ಕರೆಯುತ್ತಾರೆ. * ಉತ್ತರ ಭಾರತದಲ್ಲಿ ಕಬ್ಬಿಣದ ಬಳಕೆ ತೀವ್ರಗೊಂಡAತೆ ಕೃಷಿ ಚಟುವಟಿಕೆಗಳು ಗರಿಗೆದರಿತು. * ಹೆಚ್ಚುವರಿ ಉತ್ಪಾದನೆಯನ್ನು ನಿಯಂತ್ರಿಸುವ ವರ್ಗ ಪ್ರಭುತ್ವವಾಗಿ ಗಣರಾಜ್ಯಗಳು 2600 ವರ್ಷಗಳ ಹಿಂದೆ ಉದಯವಾದವು. * ಆನಂತರ ನಂದ, ಮೌರ್ಯ ಸಾಮ್ರಾಜ್ಯಗಳು ಪ್ರವರ್ಧಮಾನಕ್ಕೆ ಬಂದವು.

* ಕಬ್ಬಿಣಶಿಲಾಯುಗಕ್ಕೆ ಸೇರಿದ ಕರ್ನಾಟಕದ ಪ್ರಮುಖ ನೆಲೆಗಳೆಂದರೆ- ಬನಹಳ್ಳಿ, ಹಿರೆಬೆನಕಲ್ಲು, ಬ್ರಹ್ಮಗಿರಿ, ಕೊಪ್ಪ, ಹೆಗ್ಗಡೆಹಳ್ಳಿ, ಟಿ.ನರಸಿಪುರ, ಹೆಮ್ಮಿಗೆ, ಹಳ್ಳೂರು, ಜಡಿಗೇನಹಳ್ಳಿ, ಸಾವನದುರ್ಗ, ಹುತ್ರಿದುರ್ಗ, ಪಾಂಡವರದಿಣ್ಣೆ, ಮೊದಲಾದವುಗಳು.

* ಬೃಹತ್ ಶಿಲಾಯುಗದ ಸಮಾಧಿಗಳ ಪ್ರಕಾರಗಳು:. ಕಲ್ಲು ವೃತ್ತ (Stone Circle), ನಿಲಸುಗಲ್ಲು(Menhir), ಕಲ್ಮನೆ (Dolmen), ಕಲ್ಗುಪ್ಪೆ(Cairn) ಅಸ್ಥಿ ಮಡಕೆಗಳು(Urn)ಮೊದಲಾದವು ಪ್ರಮುಖವಾದವು.

( ಮುಂದುವರೆಯುವುದು…. )


Post a Comment

0 Comments