⚫ ಭಾರತದ ಭೌಗೋಳಿಕ ಲಕ್ಷಣಗಳು & ಭೂಪಟ ಅಧ್ಯಯನ

 


ಭಾರತದ ಭೌಗೋಳಿಕ ಲಕ್ಷಣಗಳು

·   * ಭಾರತ ದೇಶವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ, ಮೂರುಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಭಾಗದಿಂದಲೂ ಆವೃತವಾಗಿದ್ದು, ಇದೊಂದು ಪರ್ಯಾಯ ದ್ವೀಪವಾಗಿದೆ.

* ಇಂದು 1)ಪಾಕಿಸ್ತಾನ 2)ಆಫ್ಘಾನಿಸ್ಥಾನ 3)ಚೀನಾ 4)ನೇಪಾಳ 5)ಭೂತಾನ್ 6)ಬಾಂಗ್ಲ ಮತ್ತು 7)ಮಯನ್ಮಾರ್ದೇಶಗಳೊಂದಿಗೆ ತನ್ನ ಭೂಗಡಿಯನ್ನು ಹೊಂದಿದೆ.

* 29 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳು ಮತ್ತು ಒಂದು ರಾಷ್ಟ್ರ ರಾಜಧಾನಿ (ದೆಹಲಿ) ಪ್ರದೇಶ ಇದರ ವ್ಯಾಪ್ತಿಯಲ್ಲಿವೆ.

* ಉತ್ತರದ ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಶಿಖರಗಳನ್ನು ಒಳಗೊಂಡಿದೆ. ಭಾರತದ ಸುರಕ್ಷತೆಯನ್ನು ಹಾಗೂ ಭದ್ರತೆಯನ್ನು ಇವು ಕಾಯ್ದಿರಿಸಲು ಸಹಾಯಕವಾಗಿವೆ. ಪ್ರಾಚೀನ ಭಾರತದ ಮೇಲೆ ಉತ್ತರದ ಹಿಮಾಲಯದ ಮೂಲಕ ಆದ ಅತಿಕ್ರಮಣಗಳು ವಿರಳ.

* ವಾಯವ್ಯ ಭಾರತದಲ್ಲಿನ ಬೊಲಾನ್ ಮತ್ತು ಖೈಬರ್ ಕಣಿವೆಮಾರ್ಗಗಳ ಮೂಲಕವೇ ದಾಳಿಗಳು ಸಂಭವಿಸಿವೆ ಎನ್ನಬಹುದು. * ಅತ್ಯಂತ ಫಲವತ್ತಾದ ಮ್ತು ಸಮತಟ್ಟಾದ ಸಿಂಧೂ ಗಂಗಾ ಬಯಲು ಪ್ರದೇಶಗಳಲ್ಲಿ - ಪ್ರಾಚೀನ ನಾಗರಿಕತೆಗಳಾದ ಸಿಂಧೂ ಮತ್ತು ವೇದಕಾಲದ ನಾಗರಿಕತೆಗಳು ಮೂಡಿಬಂದಿವೆ.

* ಸಾಮಾನ್ಯವಾಗಿ ಯಾರು ಗಂಗಾನದಿಯ ಫಲವತ್ತಾದ ಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿದ್ದರೋ ರಾಜಮನೆತನಗಳವರೇ ಚಕ್ರಾಧಿಪತಿಗಳೂ ಆಗಿದ್ದರು.

* ನರ್ಮದಾ ನದಿಯು ಭಾರತವನ್ನು-ಉತ್ತರದ ಎತ್ತರ ಪ್ರದೇಶ ಅಥವಾ ಮಾಳ್ವ ಪ್ರಸ್ಥಭೂಮಿ ಹಾಗೂ ದಖನ್ ಪ್ರಸ್ಥಭೂಮಿ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಿದೆ- ಮೌರ್ಯರು ಹಾಗೂ ಗುಪ್ತರು ಪ್ರಾಚೀನ ಭಾರತದ ಸನ್ನಿವೇಶದಲ್ಲಿ ಭಾರತದ ಎರಡು ಭಾಗಗಳನ್ನು ಆಳಿದರು.

* ಭಾರತದ ಕರಾವಳಿಯ ವಿಸ್ತೀರ್ಣ-6100 ಕಿ.ಮೀ.

* ಪೂರ್ವ ಕರಾವಳಿಯನ್ನು-ಕೋರಮಂಡಲದ ತೀರವೆಂದು ಮತ್ತು ಪಶ್ಚಿಮದ ಕರಾವಳಿಯನ್ನು-ಕೊಂಕಣ/ಮಲಬಾರ್ ತೀರವೆಂದು ಕರೆದಿದ್ದಾರೆ.

* ರೇವು ಪಟ್ಟಣಗಳ ಅಭಿವೃದ್ಧಿಯು ಸಾಧ್ಯವಾಗಿ ದಕ್ಷಿಣದಲ್ಲಿ ಪ್ರಬಲ ರಾಜ್ಯಗಳಾದ ಪಾಂಡ್ಯ, ಚೇರ ಹಾಗೂ ಚೋಳರ ರಾಜ್ಯಗಳ ಉದಯಕ್ಕೆ ಕಾರಣವಾಯಿತು

*******

ಭೂಪಟದ ಅಧ್ಯಯನ

(1) ಹರಪ್ಪ: ಸಿಂಧೂ ನಾಗರಿಕತೆಯ ಪ್ರಮುಖ ನಿವೇಶನಗಳಲ್ಲಿ ಒಂದಾದ ಹರಪ್ಪ ಪ್ರದೇಶವು ರಾವಿ ನದಿಯ ದಡದಲ್ಲಿದೆ. ಇದು ಇಂದು ಪಾಕಿಸ್ತಾನದ ಪಶ್ಚಿಮ ಪಂಜಾಬ್ ಮೊಂಟೆಗೊಮರಿ ಜಿಲ್ಲೆಯಲ್ಲಿದೆ. 1921ರಲ್ಲಿ ದಯರಾಂ ಸಹಾನಿಯವರು ನಿವೇಶನವನ್ನು ಉತ್ಖನನ ಮಾಡಿದರು. ಮಹಾ ಉಗ್ರಾಣ ಇಲ್ಲಿ ಕಂಡುಬರುವ ಪ್ರಮುಖ ಕಟ್ಟಡವಾಗಿದೆ.

(2) ತಕ್ಷಶಿಲಾ: ಇದು ಪಾಕಿಸ್ತಾನದಲ್ಲಿದ್ದು, ಹಿಂದೆ ಗಾಂಧಾರ ಪ್ರಾಂತ್ಯದ ರಾಜಧಾನಿಯಾಗಿತ್ತು. ತಕ್ಷಶಿಲಾ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ಕೌಟಿಲ್ಯನು ವಿಶ್ವವಿದ್ಯಾಲಯದಲ್ಲಿ ಆಚಾರ್ಯನಾಗಿದ್ದನು.

(3) ಪಾಟಲಿಪುತ್ರ: ಗಂಗಾನದಿಯ ದಂಡೆಯ ಮೇಲಿರುವ ಇದು ಪ್ರಸ್ತುತ ಪಾಟ್ನ ಎಂದು ಕರೆಯಲ್ಪಡುತ್ತಿರುವ ಬಿಹಾರ ರಾಜ್ಯದ ರಾಜಧಾನಿಯಾಗಿದೆ. ಇದು ಮಗಧ ಸಾಮ್ರಜ್ಯ, ಮೌರ್ಯರು ಮತ್ತು ಗುಪ್ತರ ರಾಜಧಾನಿಯಾಗಿತ್ತು.

(4) ಬಾದಾಮಿ: ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ. ಬಾದಾಮಿಯ ಆರಂಭಿಕ ಹೆಸರು ವಾತಾಪಿಯಾಗಿದ್ದು, ಇದು ಚಾಲುಕ್ಯರ ರಾಜಧಾನಿಯಾಗಿತ್ತು, ಇದು ಗುಹಾಂತರ ದೇವಾಲಯಗಳಿಗೆ ಪ್ರಸಿದ್ಧಿಯಾಗಿದೆ.

(5) ಕಂಚಿ: (ಕಾಂಚಿಪುರಂ) ಇದು ತಮಿಳುನಾಡಿನ ಮದ್ರಾಸ್ ಸಮೀಪದಲ್ಲಿದೆ. ಪಲ್ಲವರ ರಾಜಧಾನಿಯಾಗಿತ್ತು. ಹಲವಾರು ಶೈವ ಮತ್ತು ವೈಷ್ಣವ ದೇವಾಲಯಗಳಿಗೆ ಪ್ರಸಿದ್ಧಿಯಾಗಿದೆ. ವಿಶ್ವ ಪ್ರಸಿದ್ಧ ಕಾಮಾಕ್ಷಿ ದೇವಾಲಯ ಇಲ್ಲಿದೆ.

(6) ಹಳೇಬೀಡು: ಇದು ಹಾಸನ ಜಿಲ್ಲೆಯಲ್ಲಿದೆ. ಇದರ ಮೊದಲ ಹೆಸರು ದೋರ ಸಮುದ್ರ ಮತ್ತು ಇದು ಹೊಯ್ಸಳರ ರಾಜಧಾನಿಯಾಗಿತ್ತು. ಹೊಯ್ಸಳೇಶ್ವರ ಮತ್ತು ಶಾಂತಳೇಶ್ವರ ದೇವಾಲಯಗಳು ಇಲ್ಲಿವೆ.

(7) ದೆಹಲಿಯಮುನಾ ನದಿ ದಡದಲ್ಲಿರುವ ದೆಹಲಿಯು ದೆಹಲಿ ಸುಲ್ತಾನರ ರಾಜಧಾನಿಯಾಗಿದ್ದಿತ್ತಲ್ಲದೆ ಕೆಲಕಾಲ ಮೊಘಲರ ರಾಜಧಾನಿಯೂ ಆಗಿತ್ತು. ಕುತುಬ್ ಮಿನಾರ್, ಕೆಂಪುಕೋಟೆ, ಜಾಮಿ ಮಸೀದಿ ಸ್ಮಾರಕಗಳು ಇಲ್ಲಿವೆ.

(8) ದೇವಗಿರಿಇದು ಮಹಾರಾಷ್ಟ್ರದಲ್ಲಿದೆ. ಅಲ್ಲಾವುದ್ದೀನ್ ಖಿಲ್ಜಿಯು ನಗರದ ಮೇಲೆ ದಂಡಯಾತ್ರೆಗಳನ್ನು ಕೈಗೊಂಡನು. ಮಹಮದ್ ಬಿನ್ ತೊಘಲಕನು ದೇವಗಿರಿಯ ಸಮೀಪ ದೌಲತಾಬಾದ್ ಎಂಬ ಹೊಸನಗರವನ್ನು ನಿರ್ಮಿಸಿದನು ಹಾಗು ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಅಲ್ಪಕಾಲ ಸ್ಥಳಾಂತರಿಸಿದ್ದನು.

(9) ಪಾಣಿಪತ್: ಇದು ಹರಿಯಾಣ ರಾಜ್ಯದಲ್ಲಿದೆ. ಭಾರತದ ಇತಿಹಾಸದಲ್ಲಿ ಇದೊಂದು ಪ್ರಸಿದ್ಧ ಕದನ ಭೂಮಿಯಾಗಿದ್ದು, ಇಲ್ಲಿ ಮೂರು ಪ್ರಮುಖ ಕದನಗಳು ಜರುಗಿದವು.

(10) ಆಗ್ರಾ: ಇದು ಉತ್ತರ ಪ್ರದೇಶದಲ್ಲಿ ಯಮುನಾ ನದಿಯ ದಡದ ಮೇಲಿದೆ. ಇದನ್ನು ಸಿಕಂದರ್ ಲೋಧಿಯು ನಿರ್ಮಿಸಿದನು. ಇದು ಮೊಘಲರ ರಾಜಧಾನಿಯಾಯಿತು. ತಾಜಮಹಲ್ ಆಗ್ರಾದಲ್ಲಿನ ಅತ್ಯಂತ ಪ್ರಮುಖ ಸ್ಮಾರಕವಾಗಿದೆ.

(11) ಹಂಪಿ: ತುಂಗಭದ್ರಾ ನದಿಯ ದಡದ ಮೇಲಿರುವ ಇದು ಬಳ್ಳಾರಿ ಜಿಲ್ಲೆಯಲ್ಲಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮುಂತಾದವು ಹಂಪಿಯ ಭವ್ಯವಾದ ಸ್ಮಾರಕಗಳಾಗಿವೆ.

(12) ಬೀದರ್: ಇದು ಬಹಮನಿ ರಾಜ್ಯದ ರಾಜಧಾನಿಯಾಗಿತ್ತು. ಮಹಮದ್ ಗವಾನ್ ನಿರ್ಮಿಸಿದ ಮದರಸ ಇಲ್ಲಿದೆ.

(13) ಬಿಜಾಪುರ(ಪ್ರಸ್ತುತ ವಿಜಯಪುರ): ಇದು ಆದಿಲ್ ಷಾಹಿಗಳ ರಾಜಧಾನಿಯಾಗಿತ್ತು. ಗೋಳಗುಮ್ಮಟ, ಇಬ್ರಾಹಿಂ ರೋಜಾ, ಅಸಾರ ಮಹಲ್, ಬಾರಾಕಮಾನ್ ಮುಂತಾದವು ಇಲ್ಲಿವೆ.

(14) ಕಲ್ಕತ್ತ: ಹೂಗ್ಲಿ ನದಿಯ ದಡದಲ್ಲಿರುವ ಇದು ಪಶ್ಚಿಮ ಬಂಗಾಳದ ರಾಜಧಾನಿ & ಭಾರತದಲ್ಲಿ ಬ್ರಿಟಿಷರ ಪ್ರಥಮ ರಾಜಧಾನಿ. ಕಲ್ಕತ್ತದ ಸಮೀಪ ಬೇಲೂರು ಎಂಬಲ್ಲಿ ಸ್ವಾಮಿ ವಿವೇಕಾನಂದರು ರಾಮಕೃಷ್ಣಮಠವನ್ನು ಸ್ಥಾಪಿಸಿದರು.

(15) ಬಾಂಬೆ: ಮಹಾರಾಷ್ಟ್ರದ ರಾಜಧಾನಿಯಾಗಿದೆ. ಇದು ಭಾರತದ ಪಶ್ಚಿಮ ತೀರದಲ್ಲಿ ಬ್ರಿಟೀಷರು ಪ್ರಮುಖ ನೆಲೆಯಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧಿವೇಶನ ಇಲ್ಲಿ ಜರುಗಿತು.

(16) ಪಾಂಡಿಚೆರಿ: ಇದು ಮದ್ರಾಸ್ ದಕ್ಷಿಣಕ್ಕೆ ಕೋರಮಂಡಲ ತೀರ ಪ್ರದೇಶದಲ್ಲಿದೆ. ಇದು ಭಾರತದಲ್ಲಿ ಫ್ರೆಂಚರ ರಾಜಧಾನಿಯಾಗಿತ್ತು.

(17) ಶ್ರೀರಂಗಪಟ್ಟಣ: ಇದು ಮಂಡ್ಯ ಜಿಲ್ಲೆಯಲ್ಲಿದೆ. ಇದು ಆರಂಭಿಕ ಮೈಸೂರು ಒಡೆಯರು, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ರಾಜಧಾನಿಯಾಗಿತ್ತು. ದರಿಯಾ ದೌಲತ್ ಅರಮನೆ ಮತ್ತು ಶ್ರೀ ರಂಗನಾಥ ದೇವಾಲಯ ಇಲ್ಲಿ ಕಂಡುಬರುವ ಪ್ರಮುಖ ಸ್ಮಾರಕಗಳು.

(18) ಮೀರತ್: ಉತ್ತರ ಪ್ರದೇಶ ರಾಜ್ಯದಲ್ಲಿದ್ದು, ದೆಹಲಿಯ ಸಮೀಪವಿದೆ. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕೇಂದ್ರವಾಗಿತ್ತು.

(19) ಜಲಿಯನ್ ವಾಲಾಬಾಗ್: ಇದು ಪಂಜಾಬಿನ ಅಮೃತಸರದಲ್ಲಿದೆ. ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ನಿರಾಯುಧ ಜನರನ್ನು ಜನರಲ್ ಡಯರ್ ಎಂಬುವನು 1919ರಲ್ಲಿ ಕಗ್ಗೊಲೆಗೈದನು.

(20) ದಂಡಿ: ಇದು ಗುಜರಾತಿನ ಪಶ್ಚಿಮ ತೀರದಲ್ಲಿದೆ. ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ಇಲ್ಲಿಂದ ಆರಂಭಿಸಿದರು.

(ಮುಂದುವರೆಯುವುದು…..)


Title:  Geographical features of Indian 
            and Study of the map

File language: Kannada

Which Department: 

State: Karnataka

Published Date: 07 -06-2022

File format : jpg /pdf/text

File size :  1.5 mb

Number of Pages : 04

Availability for download: Yes

Availability of websites link: No

Scanned Copy : No

Editable Text : No

Copy text : No

Print enable : Yes

Quality : High

File size reduced: No

Password Protected: No

Password Encrypted : No

Image File Available : Yes

Cost : Free of cost

Post a Comment

0 Comments