* ಈ ಜಿಲ್ಲೆಯಲ್ಲಿ 4 ತಾಲ್ಲೂಕುಗಳಿವೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು
ಪೂರ್ವ ಮತ್ತು ಆನೇಕಲ್.
* ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನವನ ಮಕ್ಕಳು ನೋಡಲೇಬೇಕಾದ ಸ್ಥಳ. ಇಲ್ಲಿ ನಾವು
ಸಫಾರಿ ಹೋಗಬಹುದು. ಮುಕ್ತವಾಗಿ ವಿಹರಿಸುತ್ತಿರುವ ವನ್ಯಮೃಗಗಳನ್ನು ನೋಡಬಹುದು. ಅದರೊಳಗೆ ಹಾವುಗಳ
ಉದ್ಯಾನವನವಿದೆ.
* ಮುಸ್ಲಿಮರಿಗೆ ಪವಿತ್ರವಾದ ಪ್ರಸಿದ್ಧ ಮಸೀದಿಗಳಿವೆ. ಸಂಗೀನ್ ಜಾಮಿಯಾ ಮಸೀದಿ, ಜುಮ್ಮಾ ಮಸೀದಿ,
ಜಾಮಿಯಾ ಮಸೀದಿ. ಇತ್ತೀಚಿಗೆ ನಿರ್ಮಿಸಿರುವ ಮಸೀದಿಯೆಂದರೆ 1981 ರಲ್ಲಿ ನಿರ್ಮಿಸಿರುವ ಖಾದ್ರಿಯಾ
ಮಸೀದಿ ಮತ್ತು ಬನ್ನೇರುಟ್ಟ ರಸ್ತೆಯಲ್ಲಿ 2015ರಲ್ಲಿ ನಿರ್ಮಿಸಿರುವ ಬಿಲಾಲ್ ಮಸೀದಿ.
* ಬೆಂಗಳೂರಿನಲ್ಲಿರುವ ಪ್ರಸಿದ್ಧ ಚರ್ಚುಗಳು : ಸೆಂಟ್ ಮೇರೀಸ್ ಬ್ಯಾಸಿಕಲ್,
ಸೆಂಟ್ ಮಾರ್ಕ್ ಕೆಥಡ್ರಲ್, ಇನ್ಫ್ಯಾಂಟ್ ಜೀಸಸ್ ಚರ್ಚ್, ಸೆಂಟ್ ಫ್ರಾನ್ಸಿಸ್ ಜೇವಿಯರ್ ಕೆಥೆಡ್ರಲ್
ಮುಂತಾದವು.
2)
ಬೆಂಗಳೂರು ಗ್ರಾಮೀಣ ಜಿಲ್ಲೆ :
*
ಈ ಜಿಲ್ಲೆಯು 1986ರಲ್ಲಿ ಅಸ್ತಿತ್ವಕ್ಕೆ ಬಂದಿತು.
*
ಈ ಜಿಲ್ಲೆಯಲ್ಲಿ 4 ತಾಲ್ಲೂಕುಗಳಿವೆ. ಅವುಗಳು: ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ.
*
ನೆಲಮಂಗಲ ತಾಲ್ಲೂಕಿನಲ್ಲಿರುವ ಶಿವಗಂಗೆ ಪ್ರಸಿದ್ಧವಾದ ಯಾತ್ರಾಕ್ಷೇತ್ರವಾಗಿದೆ.
*
ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
3)
ರಾಮನಗರ ಜಿಲ್ಲೆ :
* ಈ ಜಿಲ್ಲೆಯನ್ನು ಆಗಸ್ಟ್ 23, 2007ರಲ್ಲಿ ರಚಿಸಲಾಯಿತು.
* ಈ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಿವೆ. ಚನ್ನಪಟ್ಟಣ, ಕನಕಪುರ, ರಾಮನಗರ ಮತ್ತು
ಮಾಗಡಿ.
* ಬಿಡದಿ ಕೈಗಾರಿಕಾ ಪ್ರದೇಶವು ರಾಜ್ಯದ ಪ್ರಮುಖ ಕೇಂದ್ರವಾಗಿದೆ. ಅಲ್ಲಿ ಸಾವಿರಾರು
ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳು ಕಾರ್ಯನಿರತವಾಗಿವೆ.
* ಈ ಜಿಲ್ಲೆಯು ಎರಡು ಮುಖ್ಯ ಉತ್ಪನ್ನಗಳಿಗೆ ಹೆಸರುವಾಸಿ. ಮೊದಲನೆಯದು ಚನ್ನಪಟ್ಟಣದ
ಆಟದ ಗೊಂಬೆಗಳು. ಎರಡನೆಯದು ರೇಷ್ಮೆ ಉತ್ಪಾದನೆ.
4)
ಚಿಕ್ಕಬಳ್ಳಾಪುರ ಜಿಲ್ಲೆ :
* ಕೋಲಾರ ಜಿಲ್ಲೆಯನ್ನು ವಿಭಜಿಸಿ ನವೆಂಬರ್ 10, 2007ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು
ಹೊಸದಾಗಿ ರಚಿಸಲಾಯಿತು. ಚಿಕ್ಕಬಳ್ಳಾಪುರ,
* ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಟ್ಟ, ಗುಡಿಬಂಡೆ, ಚಿಂತಾಮಣಿ - ಈ ಜಿಲ್ಲೆಯ
ತಾಲ್ಲೂಕುಗಳು.
* ನಂದಿದುರ್ಗ ಇಲ್ಲಿ ಪ್ರಸಿದ್ಧ ಗಿರಿಧಾಮ. ಇಲ್ಲಿ ಯೋಗನಂದೀಶ್ವರ ಮತ್ತು ಭೋಗನಂದೀಶ್ವರ
ದೇವಾಲಯಗಳಿವೆ.
* ಚಿಂತಾಮಣಿ ತಾಲ್ಲೂಕಿನ ಕೈವಾರವು ತಾತಯ್ಯ ಅನ್ನುವ ಅನುಭಾವಿಗಳ ಕೇಂದ್ರವಾಗಿದೆ.
* ಗೌರಿಬಿದನೂರು ತಾಲ್ಲೂಕಿನಲ್ಲಿ ವಿಧುರಾಶ್ವತ್ಥ ಎಂಬ ಚಾರಿತ್ರಿಕ ಸ್ಥಳವಿದೆ. ಇಲ್ಲಿ
1938ರಲ್ಲಿ ಬ್ರಿಟಿಷರ ವಿರುದ್ಧ ಧ್ವಜ ಸತ್ಯಾಗ್ರಹ ನಡೆದಿತ್ತು. ಅದರ ಸ್ಮಾರಕವಾಗಿ ಅಲ್ಲಿ ವೀರಸೌಧವನ್ನು
ನಿರ್ಮಿಸಲಾಗಿದೆ.
* ಬಾಗೇಪಲ್ಲಿ ತಾಲ್ಲೂಕಿನ ನಿಡುಮಾಮಿಡಿ ಮಠ ಪ್ರಸಿದ್ಧವಾಗಿದೆ.
* ಈ ಜಿಲ್ಲೆಯ ಶಿಡ್ಲಟ್ಟ ತಾಲ್ಲೂಕು ವ್ಯಾಪಾರ ಕೇಂದ್ರವಾಗಿದೆ. ಇದು ರೇಷ್ಮೆ ವ್ಯಾಪಾರಕ್ಕೆ
ಪ್ರಸಿದ್ಧಿಯಾಗಿದೆ.
5)
ಕೋಲಾರ ಜಿಲ್ಲೆ :
* 2003ರಲ್ಲಿ ಕೋಲಾರದ ಚಿನ್ನದ ಗಣಿಯನ್ನು ಮುಚ್ಚಲಾಯಿತು.
* ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಲು ಮತ್ತು ಶ್ರೀನಿವಾಸಪುರ ಇಲ್ಲಿನ ತಾಲ್ಲೂಕುಗಳು.
* ಇದು ಒಣಭೂಮಿಯಿಂದ ಕೂಡಿದ ಬರ ಪೀಡಿತ ಜಿಲ್ಲೆ. ಈ ಜಿಲ್ಲೆಯ ಚಿಕ್ಕತಿರುಪತಿಯು ಪ್ರಸಿದ್ಧ
ಯಾತ್ರಾಸ್ಥಳವಾಗಿದೆ.
* ಈ ಜಿಲ್ಲೆಯಲ್ಲಿ ಅನೇಕ ಕೆರೆಗಳಿವೆ. ಅಂತರಗಂಗೆ ಎಂಬ ಸ್ಥಳವು ಮಹತ್ವದ ಚಾರಿತ್ರಿಕ
ಸ್ಥಳವಾಗಿದೆ.
* ಹಜರತ್ ಬಾಬಾ, ಹೈದರಾಲಿ ದರ್ಗಾ, ಶ್ರೀಪಾದರಾಯರ ಬೃಂದಾವನ ಸಹ ಕೋಲಾರ ಜಿಲ್ಲೆಯಲ್ಲಿದೆ.
6) ತುಮಕೂರು ಜಿಲ್ಲೆ :
* ಈ ಜಿಲ್ಲೆಯು 1832ರಲ್ಲಿ ಅಸ್ತಿತ್ವಕ್ಕೆ ಬಂತು. ನಮ್ಮ ರಾಜ್ಯದ ಒಂದು ದೊಡ್ಡ ಜಿಲ್ಲೆ.
* ಇದು ತೆಂಗಿನಕಾಯಿ ಬೆಳೆಗೆ ಪ್ರಸಿದ್ಧವಾಗಿದೆ..
* ಈ ಜಿಲ್ಲೆಯು ಹತ್ತು ತಾಲ್ಲೂಕುಗಳನ್ನು ಹೊಂದಿದೆ. ಅವುಗಳು: ಕೊರಟಗೆರೆ, ಗುಬ್ಬಿ,
ಚಿಕ್ಕನಾಯಕನಹಳ್ಳಿ, ಪಾವಗಡ, ಕುಣಿಗಲ್, ತುರುವೇಕೆರೆ, ತಿಪಟೂರು, ಮಧುಗಿರಿ, ತುಮಕೂರು ಮತ್ತು ಸಿರಾ.
* ಅನೇಕ ಪಾಳೆಗಾರರು ಕಟ್ಟಿಸಿರುವ ಅನೇಕ ಕೋಟೆಗಳು ಇಲ್ಲಿವೆ. ಮಧುಗಿರಿ, ಮಿಡಿಗೇಶಿ,
ಪಾವಗಡ, ನಿಡುಗಲ್, ದೇವರಾಯನದುರ್ಗ, ಹುಲಿಯೂರುದುರ್ಗ ಮತ್ತು ಸಿರಾಗಳಲ್ಲಿ ಅಂತಹ ಕೋಟೆಗಳಿವೆ.
* ಈ ಜಿಲ್ಲೆಯು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಶ್ರೀ ಶಿವಕುಮಾರಸ್ವಾಮಿಗಳ
ನೇತೃತ್ವದಲ್ಲಿ ಸಿದ್ಧಗಂಗೆಯಲ್ಲಿ ಸಾವಿರಾರು ಬಡ ವಿದ್ಯಾಗಳಿಗೆ ಅನ್ನ ಮತ್ತು ಅಕ್ಷರ ದಾಸೋಹ ನಡೆಯುತ್ತದೆ.
ಪ್ರಸಿದ್ಧ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಇಲ್ಲಿ ನೆನೆಯಬಹುದು.
* ಇಡೀ ದೇಶದಲ್ಲಿ ವಿಶಿಷ್ಟವಾದ ಕುದುರೆ ತಳಿ ಅಭಿವೃದ್ಧಿ ಕೇಂದ್ರ ಕುಣಿಗಲ್ಲಿನಲ್ಲಿದೆ.
ಇಂದು ಇದು ರಾಜ್ಯದ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ.
* ಮಧುಗಿರಿಯಲ್ಲಿ ಏಷಿಯಾ ಖಂಡದಲ್ಲಿಯೇ ಅತ್ಯಂತ ಎತ್ತರವಾದ ಏಕಶಿಲಾ ಬೆಟ್ಟವಿದೆ.
* ದೇವರಾಯನದುರ್ಗವು ಪುರಾಣ ಪ್ರಸಿದ್ಧ ಪಡೆದಿದೆ.
* ಕುಣಿಗಲ್ ಕೆರೆಯ ಬಗ್ಗೆ ಪ್ರಸಿದ್ಧ ಜನಪದ ಗೀತೆಯಿದೆ.
* ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿಯ ಲಕ್ಷ್ಮೀ ದೇವಾಲಯ ಪ್ರಸಿದ್ಧವಾಗಿದೆ.
7) ಚಿತ್ರದುರ್ಗ ಜಿಲ್ಲೆ :
* ಚಿತ್ರದುರ್ಗ ಜಿಲ್ಲೆಯ ಏಳುಸುತ್ತಿನ ಅಭೇದ್ಯ ಕೋಟೆಯೊಳಗೆ ನೀರಿನ ಕೊಳಗಳಿವೆ ಮತ್ತು
ದೇವಾಲಯಗಳಿವೆ.
* ಈ ಜಿಲ್ಲೆಯಲ್ಲಿನ ತಾಲ್ಲೂಕುಗಳು ಹೀಗಿವೆ: ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ,
ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು.
* ಈ ಜಿಲ್ಲೆಯು ಪಾಳೆಗಾರರಿಗೆ ಪ್ರಸಿದ್ಧವಾಗಿದೆ. ಮದಕರಿ ನಾಯಕ ಎಂಬ ಪಾಳೆಗಾರರು ಹೆಸರುವಾಸಿಯಾಗಿದ್ದಾರೆ.
ಒನಕೆ ಓಬವ್ವ ಸಾಹಸಕ್ಕೆ ಹೆಸರಾಗಿದ್ದಾಳೆ.
* ಎಸ್. ನಿಜಲಿಂಗಪ್ಪ, ಮಲ್ಲಾಡಿಹಳ್ಳಿ ರಾವೇಂದ್ರಸ್ವಾಮಿ, ತಳುಕಿನ ವೆಂಕಣ್ಣಯ್ಯ,
ತರಾಸು, ಶ್ರೀ ಶಿವಮೂರ್ತಿ ಮುರುಘಾ ಶರಣರು, ತರಳಬಾಳು ಸ್ವಾಮೀಜಿಗಳು, ಕಬೀರನಂದಾಶ್ರಮದ ಶಿವಲಿಂಗಾನಂದಸ್ವಾಮಿ,
ಜಗಳೂರ ಇಮಾಂಸಾಬ್ ಮುಂತಾದವರು ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳು.
8) ದಾವಣಗೆರೆ ಜಿಲ್ಲೆ :
*
ಚಿತ್ರದುರ್ಗ ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು.
*
ಹೊಸದಾಗಿ ರಚನೆಯಾದ ಜಿಲ್ಲೆಗೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವು
ಭಾಗಗಳನ್ನು ಸೇರಿಸಲಾಯಿತು. ಈ ಜಿಲ್ಲೆಯು ಆರು ತಾಲ್ಲೂಕುಗಳನ್ನು ಹೊಂದಿದೆ. ಅವುಗಳು ಯಾವುವೆಂದರೆ:
ಹರಿಹರ, ಹರಪನಹಳ್ಳಿ, ಚನ್ನಗಿರಿ, ಹೊನ್ನಾಳಿ, ಜಗಳೂರು ಮತ್ತು ದಾವಣಗೆರೆ.
*
ದಾವಣಗೆರೆ ನಗರವು ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಸರನ್ನು ಪಡೆದಿತ್ತು.
*
ಇದು 1960ರ ದಶಕದಲ್ಲಿ ಜವಳಿ ಉತ್ಪನ್ನಕ್ಕೆ ಹೆಸರುವಾಸಿಯಾಗಿತ್ತು.
*
ಕರ್ನಾಟಕದ ಪ್ರಸಿದ್ಧ ಶಿಕ್ಷಣ ಕೇಂದ್ರ ಎಂಬ ಹೆಸರನ್ನು ಅದು ಗಳಿಸಿದೆ. ಪ್ರಸಿದ್ಧ ಬಾಪೂಜಿ ಶಿಕ್ಷಣ
ಸಂಸ್ಥೆಯು ಇಲ್ಲಿದೆ.
* ಇಡೀ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಕೆರೆ ಶಾಂತಿ ಸಾಗರ ಚನ್ನಗಿರಿಯಲ್ಲಿದೆ. ಇದರ
ಸುತ್ತಳತೆ ಸುಮಾರು 64 ಕಿ.ಮೀ.
* ಹರಿಹರ ನಗರದಲ್ಲಿ ಹೊಯ್ಸಳ ಕಾಲದ ಹರಿಹರೇಶ್ವರ ದೇವಾಲಯವಿದೆ.
9) ಶಿವಮೊಗ್ಗ ಜಿಲ್ಲೆ :
*
ಕರ್ನಾಟಕದ ಒಂದು ಪ್ರಸಿದ್ಧ ಜಿಲ್ಲೆಯಾಗಿದ್ದು, ಪ್ರಾಕೃತಿಕ ಸೌಂದರ್ಯಕ್ಕೆ ಇದು ಹೆಸರುವಾಸಿಯಾಗಿದೆ.
*
ಈ ಜಿಲ್ಲೆಯಲ್ಲಿ 6 ತಾಲ್ಲೂಕುಗಳಿವೆ. ಅವು: ತೀರ್ಥಹಳ್ಳಿ, ಸಾಗರ, ಸೊರಬ, ಭದ್ರಾವತಿ, ಶಿವಮೊಗ್ಗ,
ಶಿಕಾರಿಪುರ ಮತ್ತು ಹೊಸನಗರ.
*
ಇದನ್ನು ಕರ್ನಾಟಕದ ಭತ್ತದ ಕಣಜ ಎಂದು ಹೇಳಲಾಗುತ್ತದೆ.
*
ತುಂಗಭದ್ರ, ಶರಾವತಿ, ವರದಾ ಮತ್ತು ಕುಮದ್ವತಿ ನದಿಗಳು ಜಿಲ್ಲೆಯಲ್ಲಿವೆ.
*
ಇಲ್ಲಿನ ಜೋಗ್ ಜಲಪಾತವು ವಿಶ್ವ ಪ್ರಸಿದ್ಧವಾಗಿದೆ.
*
ಜಿಲ್ಲೆಯ ಶಂಕರಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯವಿದೆ.
*
ಈ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆಯಿದೆ.
*
ನಾಡಿಗೆ ಅಗತ್ಯವಾದ ವಿದ್ಯುತ್ತನ್ನು ಇಲ್ಲಿನ ಶರಾವತಿ ಜಲ ವಿದ್ಯುತ್ ಮತ್ತು ವರಾಹಿ ಜಲ ವಿದ್ಯುತ್
ಕೇಂದ್ರಗಳು ಒದಗಿಸುತ್ತವೆ.
*
ಶಿವಮೊಗ್ಗ ನಗರವನ್ನು ಕೆಳದಿ ಅರಸರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.
*
ಕೆಳದಿಯಲ್ಲಿ ಒಂದು ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ.
*
ಶಿವನ ಮುಖದಂತಿರುವ ನಗರ ಶಿವಮೊಗ್ಗ ಎಂದು ಪ್ರತೀತಿಯಿದೆ .
*
ಏಷ್ಯಾ ಖಂಡದಲ್ಲಿಯೇ ಅತಿ ಎತ್ತರವಾದ ಜೋಗ ಜಲಪಾತ ಈ ಜಿಲ್ಲೆಯ ಗೇರುಸೊಪ್ಪೆಯಲ್ಲಿದೆ.
*
ಸೊರಬ ತಾಲ್ಲೂಕಿನ ಗುಡವಿ ಪಕ್ಷಿ ಧಾಮ, ಭದ್ರ ವನ್ಯ ಮೃಗ ಧಾಮವಿದೆ.
*
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ.
*
ಬಳ್ಳಿಗಾವಿಯ ತ್ರಿಪುರಾಂತಕೇಶ್ವರ ಮತ್ತು ಕೇದಾರೇಶ್ವರ ದೇವಾಲಯಗಳು ಪ್ರಸಿದ್ಧವಾಗಿವೆ.
*
ಜ್ಞಾನಪೀಠ ಪ್ರಶಸ್ತಿ ಪಡೆದ ಇಬ್ಬರು ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು ಮತ್ತು ಡಾ. ಯು. ಆರ್. ಅನಂತಮೂರ್ತಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದವರು.
* ರಾಷ್ಟ್ರಪ್ರಶಸ್ತಿ
ಪುರಸ್ಕೃತ ಹಾಡುಗಾರ ಶಿವಮೊಗ್ಗ ಸುಬ್ಬಣ್ಣ ಈ ಜಿಲ್ಲೆಯವರು.
0 Comments