ಪದಾರ್ಥಗಳನ್ನು
ಬೇರ್ಪಡಿಸುವ ವಿಧಾನಗಳು
ಬಡಿಯುವಿಕೆ :
ಧಾನ್ಯಗಳನ್ನು ಪೈರುಗಳಿಂದ ಬೇರ್ಪಡಿಸಲು ಬಳಸುವ ಕ್ರಿಯೆಯೇ ಬಡಿಯುವಿಕೆ (threshing). ಈ ಕ್ರಿಯೆಯಲ್ಲಿ, ಧಾನ್ಯದ ಬೀಜಗಳನ್ನು ಪ್ರತ್ಯೇಕಿಸಲು ಪೈರುಗಳನ್ನು ಬಡಿಯಲಾಗುತ್ತದೆ. ಕೆಲವೊಮ್ಮೆ ಎತ್ತುಗಳ ಸಹಾಯದಿಂದ ಧಾನ್ಯಗಳನ್ನು ಪೈರುಗಳಿಂದ ಬೇರ್ಪಡಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ಧಾನ್ಯಗಳನ್ನು ಬೇರ್ಪಡಿಸಲು ಯಂತ್ರಗಳನ್ನು ಸಹ ಬಳಸಲಾಗುತ್ತದೆ.
ತೂರುವಿಕೆ :
ಮಿಶ್ರಣದ ಘಟಕಗಳನ್ನು ಬೇರ್ಪಡಿಸುವ ಈ ವಿಧಾನವನ್ನು ತೂರುವಿಕೆ (winnowing) ಎನ್ನುವರು. ಬೀಸುವ ಗಾಳಿಯ ಸಹಾಯದಿಂದ ಒಂದು ಮಿಶ್ರಣದಲ್ಲಿರುವ ಭಾರವಾದ ಮತ್ತು ಹಗುರವಾದ ಘಟಕಗಳನ್ನು ಬೇರ್ಪಡಿಸಲು ತೂರುವಿಕೆಯನ್ನು ಬಳಸಲಾಗುತ್ತದೆ. ಭಾರವಾದ ಧಾನ್ಯದ ಕಾಳಿನಿಂದ ಹಗುರವಾದ ಹೊಟ್ಟಿನ ಕಣಗಳನ್ನು ಬೇರ್ಪಡಿಸಲು ಸಾಮಾನ್ಯವಾಗಿ ರೈತರು ಈ ವಿಧಾನವನ್ನು ಅನುಸರಿಸುತ್ತಾರೆ. ಹೊಟ್ಟಿನ ಕಣಗಳನ್ನು ಗಾಳಿಯು ದೂರ ಕೊಂಡೊಯ್ಯುತ್ತದೆ. ಧಾನ್ಯದ ಬೀಜಗಳು ಪ್ರತ್ಯೇಕಗೊಂಡು ತೂರುವಿಕೆಯ ದಿಬ್ಬದ ಬದಿಯಲ್ಲಿ ರಾಶಿಯಾಗುತ್ತದೆ. ಪ್ರತ್ಯೇಕಗೊಂಡ ಈ ಹೊಟ್ಟು ದನ-ಕರುಗಳ ಮೇವಿನಂತಹ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತದೆ.
ಜರಡಿ ಹಿಡಿಯುವಿಕೆಯಲ್ಲಿ
ಹಿಟ್ಟಿನ ಸಣ್ಣ ಕಣಗಳು ಜರಡಿಯ ರಂಧ್ರಗಳಿಂದ ಹಾದು ಹೋಗುತ್ತವೆ ಮತ್ತು ದೊಡ್ಡ ಗಾತ್ರದ ಅಶುದ್ಧಕಾರಕಗಳು
ಜರಡಿಯಲ್ಲೇ ಉಳಿದುಕೊಳ್ಳುತ್ತವೆ. ಹಿಟ್ಟಿನ ಗಿರಣಿಯಲ್ಲಿ ಗೋಧಿಯನ್ನು ಪುಡಿಮಾಡುವ ಮೊದಲು ಹೊಟ್ಟು
ಮತ್ತು ಕಲ್ಲುಗಳಂತಹ ಅಶುದ್ಧಕಾರಕಗಳನ್ನು ತೆಗೆಯಲಾಗುತ್ತದೆ. ಸಾಮಾನ್ಯವಾಗಿ ಇಡೀ ಜೋಳದ ಚೀಲವನ್ನು
ಇಳಿಜಾರು ಜರಡಿಗೆ ಸುರಿಯಲಾಗುತ್ತದೆ. ಬಡಿಯುವಿಕೆ ಮತ್ತು ತೂರುವಿಕೆಯ ನಂತರವೂ ಉಳಿದಿರಬಹುದಾದ ಕಲ್ಲಿನ
ತುಂಡು, ಕಡ್ಡಿ ಮತ್ತು ಹೊಟ್ಟುಗಳನ್ನು ಜರಡಿಯು ಪ್ರತ್ಯೇಕಗೊಳಿಸುತ್ತದೆ. ಮಿಶ್ರಣದಲ್ಲಿರುವ ಕಣಗಳು
ಬೇರೆ ಬೇರೆ ಗಾತ್ರದಲ್ಲಿದ್ದಾಗ ಜರಡಿ ಹಿಡಿಯುವಿಕೆಯನ್ನು ಬಳಸುತ್ತಾರೆ.
ಅಕ್ಕಿ ಅಥವಾ ಬೇಳೆಗಳನ್ನು
ಅಡುಗೆಗೆ ಮುನ್ನ ಸಾಮಾನ್ಯವಾಗಿ ತೊಳೆಯುತ್ತೇವೆ. ಇವುಗಳಿಗೆ ನೀರನ್ನು ಸೇರಿಸಿದಾಗ, ಧೂಳು ಮತ್ತು ಮಣ್ಣಿನ
ಕಣಗಳಂತಹ ಅಶುದ್ಧಕಾರಕಗಳು ಬೇರ್ಪಡುತ್ತವೆ. ಈ ಅಶುದ್ಧಕಾರಕಗಳು ನೀರಿನಲ್ಲಿ ಸೇರುತ್ತವೆ. ನೀರನ್ನು
ಹಾಕಿದಾಗ ಮಿಶ್ರಣದಲ್ಲಿರುವ ಭಾರವಾದ ಘಟಕವು ತಳಭಾಗದಲ್ಲಿ ಉಳಿಯುವ ಕ್ರಿಯೆಯನ್ನು ಗುರುತ್ವ ಬಲದಿಂದ
ಬೇರ್ಪಡಿಸುವಿಕೆ (sedimentation) ಎನ್ನುವರು.
ಬಸಿಯುವಿಕೆ:
ನೀರನ್ನು (ಧೂಳು ಮಿಶ್ರಿತ)
ತೆಗೆಯುವ ಕ್ರಿಯೆಯನ್ನು ಬಸಿಯುವಿಕೆ (decantation) ಎನ್ನುವರು. ಎರಡು ಪರಸ್ಪರ ಬೆರೆಯದ ದ್ರವಗಳ
ಮಿಶ್ರಣವನ್ನು ಪ್ರತ್ಯೇಕಿಸುವುದಕ್ಕೂ ಇದೇ ತತ್ವವನ್ನು ಬಳಸಲಾಗುತ್ತದೆ. ಉದಾಹರಣೆಗೆ, ಎಣ್ಣೆ ಮತ್ತು
ನೀರಿನ ಮಿಶ್ರಣವನ್ನು ಈ ವಿಧಾನದಿಂದ ಬೇರ್ಪಡಿಸಬಹುದು. ಈ ರೀತಿಯ ದ್ರವಗಳ ಮಿಶ್ರಣವನ್ನು ಕೆಲವು ಕಾಲ
ಕದಲದಂತೆ ಇಟ್ಟರೆ, ಅವು ಎರಡು ಪ್ರತ್ಯೇಕ ಪದರಗಳನ್ನು ಉಂಟುಮಾಡುತ್ತವೆ. ಮೇಲಿನ ಪದರವನ್ನು ಉಂಟುಮಾಡುವ
ಘಟಕವನ್ನು ಬಸಿಯುವಿಕೆಯಿಂದ ಬೇರ್ಪಡಿಸಬಹುದು.
ನೀರು ಇನ್ನೂ ಮಣ್ಣು
ಮಿಶ್ರಿತವಾಗಿದ್ದರೆ ಅತೀ ಚಿಕ್ಕ ರಂಧ್ರಗಳುಳ್ಳ ಸೋಸುವ ಸಲಕರಣೆಯನ್ನು ಬಳಸಿ ಅಶುದ್ಧಕಾರಕಗಳನ್ನು ಬೇರ್ಪಡಿಸಬಹುದು.
ಸೋಸು ಕಾಗದ ಈ ರೀತಿಯ ಸೂಕ್ಷö್ಮ ರಂಧ್ರಗಳನ್ನು ಹೊಂದಿರುವAತಹದ್ದಾಗಿದೆ. ಹಣ್ಣು ಮತ್ತು ತರಕಾರಿಯ
ಪಾನೀಯಗಳನ್ನು ಕುಡಿಯುವ ಮೊದಲು ಬೀಜ ಮತ್ತು ಸಿಪ್ಪೆಯ ಘನರೂಪದ ಕಣಗಳನ್ನು ಬೇರ್ಪಡಿಸಲು ಸಾಮಾನ್ಯವಾಗಿ
ಸೋಸಲಾಗುವುದು. ಸೋಸುವ ವಿಧಾನವನ್ನು ನಮ್ಮ ಮನೆಗಳಲ್ಲಿ ಖೋವಾ ಅಥವಾ ಗಿಣ್ಣು ತಯಾರಿಸುವಾಗಲೂ ಉಪಯೋಗಿಸುವರು.
ಹಾಲು ಕುದಿಯುವಾಗ ಕೆಲವು ಹನಿಗಳಷ್ಟು ನಿಂಬೆ ರಸವನ್ನು ಬೆರೆಸಿದಲ್ಲಿ ಪನೀರ್ ತಯಾರಾಗುವುದನ್ನು ನೋಡಿರುತ್ತೀರಿ.
ಇದು ಘನ ರೂಪದ ಪನೀರ್ ಕಣಗಳನ್ನು ಮತ್ತು ದ್ರವದ ಮಿಶ್ರಣವನ್ನು ಕೊಡುತ್ತದೆ. ನಂತರ ಸ್ವಚ್ಛ ಬಟ್ಟೆ
ಅಥವಾ ಜರಡಿಯನ್ನು ಬಳಸಿ ಪನೀರನ್ನು ಮಿಶ್ರಣದಿಂದ ಬೇರ್ಪಡಿಸಲಾಗುವುದು.
ನೀರನ್ನು ಆವಿಯನ್ನಾಗಿ
ಪರಿವರ್ತಿಸುವ ಕ್ರಿಯೆಯನ್ನು ಆವೀಕರಣ (evaporation) ಎನ್ನುವರು. ಎಲ್ಲೆಲ್ಲಿ
ನೀರು ಇರುವುದೋ ಅಲ್ಲಿ ಆವೀಕರಣ ಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ. ಸಮುದ್ರದ ನೀರು ಹಲವು
ಲವಣಗಳಿಂದ ಮಿಶ್ರಗೊಂಡಿರುತ್ತದೆ. ಈ ಲವಣಗಳಲ್ಲಿ ಸಾಮಾನ್ಯ ಉಪ್ಪು (common
salt)
ಒಂದು. ಸಮುದ್ರದ ನೀರನ್ನು ಆಳವಿಲ್ಲದ ಗುಂಡಿಗಳಲ್ಲಿ ಸಂಗ್ರಹಿಸಿದಾಗ ಆ ನೀರು ನಿಧಾನವಾಗಿ ಆವಿಯಾಗುತ್ತದೆ.
ಕೆಲವು ದಿನಗಳಲ್ಲಿ ನೀರು ಸಂಪೂರ್ಣ ಆವಿಯಾಗಿ ಘನ ರೂಪದ ಲವಣಗಳು ಉಳಿಯುತ್ತವೆ. ಈ ಲವಣಗಳ ಮಿಶ್ರಣವನ್ನು
ಪುನಃ ಶುದ್ಧೀಕರಿಸಿ ಸಾಮಾನ್ಯ ಉಪ್ಪನ್ನು ಪಡೆಯಲಾಗುವುದು.
ಸಾಂದ್ರೀಕರಣ :
ಮಂಜುಗಡ್ಡೆಯಿಂದ ತಂಪಾದ ಲೋಹದ ತಟ್ಟೆಗೆ ಹಬೆ ತಗುಲಿದಾಗ ಅದು ಸಾಂದ್ರಗೊಂಡು ದ್ರವರೂಪದ ನೀರನ್ನು ಉಂಟುಮಾಡುತ್ತದೆ. ತಟ್ಟೆಯಿಂದ ಹನಿಯಾಗಿ ಬೀಳುವ ನೀರು ಹಬೆಯ ಸಾಂದ್ರೀಕರಣದಿಂದ ಉಂಟಾಗಿರುವುದು. ನೀರಾವಿಯು ಅದರ ದ್ರವ ರೂಪಕ್ಕೆ ಬದಲಾಗುವ ಕ್ರಿಯೆಯನ್ನು ಸಾಂದ್ರೀಕರಣ (condensation) ಎನ್ನುವರು.
ಸಾರಾಂಶ :
. ಕೈಯಿಂದ ಆರಿಸುವಿಕೆ, ತೂರುವಿಕೆ, ಜರಡಿ ಹಿಡಿಯುವಿಕೆ, ಗುರುತ್ವ ಬಲದಿಂದ ಬೇರ್ಪಡಿಸುವಿಕೆ, ಬಸಿಯುವಿಕೆ ಮತ್ತು ಸೋಸುವಿಕೆ ಇವುಗಳು ಪದಾರ್ಥಗಳನ್ನು ಅವುಗಳ ಮಿಶ್ರಣದಿಂದ ಬೇರ್ಪಡಿಸುವ ವಿಧಾನಗಳಾಗಿವೆ.
. ಧಾನ್ಯಗಳಲ್ಲಿರುವ
ಹೊಟ್ಟು ಮತ್ತು ಕಲ್ಲುಗಳನ್ನು ಕೈಯಿಂದ ಆರಿಸಿ ಬೇರ್ಪಡಿಸಬಹುದು.
. ಧಾನ್ಯಗಳ ಭಾರವಾದ
ಬೀಜಗಳಿಂದ ಹಗುರಾದ ಹೊಟ್ಟನ್ನು ತೂರುವಿಕೆ ವಿಧಾನದಿಂದ ಬೇರ್ಪಡಿಸುವರು.
. ಜರಡಿ ಹಿಡಿಯುವಿಕೆ ಮತ್ತು ಸೋಸುವಿಕೆ ಕ್ರಿಯೆಗಳಲ್ಲಿ ಮಿಶ್ರಣದಲ್ಲಿರುವ ಕಣಗಳ ಗಾತ್ರಗಳ ವ್ಯತ್ಯಾಸವನ್ನು ಬಳಸಿ ಅವುಗಳನ್ನು ಬೇರ್ಪಡಿಸುವರು.
. ಮರಳು ಮತ್ತು ನೀರಿನ ಮಿಶ್ರಣದಲ್ಲಿ ಮರಳಿನ ಭಾರವಾದ ಕಣಗಳು ನೀರಿನ ತಳದಲ್ಲಿ ಸಂಗ್ರಹವಾಗುತ್ತವೆ ಮತ್ತು ಬಸಿಯುವಿಕೆಯಿಂದ ನೀರನ್ನು ಬೇರ್ಪಡಿಸಬಹುದು.
. ಕರಗದೇ ಇರುವ ಘನ ಮತ್ತು ಒಂದು ದ್ರವ ಮಿಶ್ರಣದಲ್ಲಿ ಘಟಕಗಳನ್ನು ಬೇರ್ಪಡಿಸಲು ಸೋಸುವಿಕೆಯನ್ನು ಬಳಸಬಹುದು.
. ‘ತೂರುವವರು' ಇದನ್ನು 1853 ರಲ್ಲಿ ಗುಸ್ಟವ್ ಕೌರ್ಬೆಟ್ ರವರ (Gustav courbet) ಚಿತ್ರಕಲೆ ಮೂಸಿ ಡಿ ಬೀಯಸ್ ಆರ್ಟ್ಸ್, ನಾಂಚೆಸ್, ಫ್ರಾನ್ಸ್ ಇವರ ಅಪ್ಪಣೆಯ ಮೇರೆಗೆ ಪುನರ್ಮುದ್ರಿಸಿದ್ದು.
ಸ್ನೇಹಿತರೇ, ಮೇಲಿನ ವಿವರಣೆಯನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ತಲೆಬರಹ: ಪದಾರ್ಥಗಳನ್ನು ಬೇರ್ಪಡಿಸುವ ವಿಧಾನಗಳು
ಕಡತದ
ಭಾಷೆ : ಕನ್ನಡ
ಇಲಾಖೆ
: ಶಿಕ್ಷಣ ಇಲಾಖೆ
ರಾಜ್ಯ:
ಕರ್ನಾಟಕ
ಪ್ರಕಟಿಸಿದ
ದಿನಾಂಕ : 07-06-2022
ಫೈಲ್
ಫಾರ್ಮ್ಯಾಟ್ : ಪಿಡಿಎಫ್/ಜೆಪಿಜೆ/ಟೆಕ್ಸ್ಟ್
ಫೈಲ್
ಗಾತ್ರ : 1.5ಎಂ.ಬಿ.
ಪುಟಗಳ
ಸಂಖ್ಯೆ : 3
ಡೌನ್ಲೋಡ್
ಲಿಂಕ್ : ಇದೆ
ವೆಬ್ಸೈಟ್
ಲಿಂಕ್ : ಇಲ್ಲ
ಸ್ಕ್ಯಾನ್
ಮಾಡಿದ ಪ್ರತಿ : ಅಲ್ಲ
ಸಂಪಾದಿಸಬಹುದಾದ
ಪಠ್ಯ : ಇಲ್ಲ
ನಕಲು
ಪಠ್ಯ : ಅಲ್ಲ
ಮುದ್ರಣ
: ಲಭ್ಯವಿದೆ
ಗುಣಮಟ್ಟ
: ಅತ್ಯುತ್ತಮ
ಫೈಲ್
ಗಾತ್ರ ಕಡಿಮೆಯಾಗಿದೆ : ಇಲ್ಲ
ಗುಪ್ತಪದ
: ಇಲ್ಲ
ಪಾಸ್ವರ್ಡ್
ಎನ್ಕ್ರಿಪ್ಟ್ : ಇಲ್ಲ
ಇಮೇಜ್
ಫೈಲ್ ಲಭ್ಯತೆ : ಇದೆ
ಫೈಲ್
ನ ವೆಚ್ಚ/ಮೌಲ್ಯ : ಸಂಪೂರ್ಣ ಉಚಿತ
0 Comments