* ನಮ್ಮ ಕರ್ನಾಟಕ Notes -ಬೆಂಗಳೂರು ವಿಭಾಗದ ವಿಶೇಷತೆ


ಆಡಳಿತದ ಅನುಕೂಲಕ್ಕೆ ನಮ್ಮ ರಾಜ್ಯವನ್ನು 4 ಕಂದಾಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ವಿಭಾಗಗಳ ಬಗ್ಗೆ ಇಲ್ಲಿ ವಿವರಿಸಲಾಗುವುದು.
1. ಕರ್ನಾಟಕದಲ್ಲಿ ಆಡಳಿತ ವಿಭಾಗಗಳು :
*  ನಮ್ಮ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಚರಿತ್ರೆಯಿದೆ ಎಂದು ಹೇಳಲಾಗಿದೆ.
*  ಬ್ರಿಟಿಷರ ಆಡಳಿತ ಕಾಲದಲ್ಲಿ ವಿವಿಧ ಜಿಲ್ಲೆಗಳನ್ನು ರೂಪಿಸಲಾಯಿತು.
*  ಇಂದು ಯಾವುದನ್ನು ವಿಜಯಪುರ ಎಂದು ಕರೆಯುತ್ತಿದ್ದೇವೆಯೋ ಅದರ ಜಿಲ್ಲಾ ಕೇಂದ್ರ ಕಲಾದಗಿಯಾಗಿತ್ತು. ಮತ್ತೆ ಅದನ್ನು ವಿಜಯಪುರಕ್ಕೆ ಬದಲಾಯಿಸಲಾಯಿತು.
*  ನಮ್ಮ ರಾಜ್ಯದಲ್ಲಿ ಆಡಳಿತದ ಅನುಕೂಲಕ್ಕೆ ನಾಲ್ಕು ಕಂದಾಯ ವಿಭಾಗಗಳನ್ನು ರೂಪಿಸಲಾಗಿದೆ. ಅವುಗಳು ಹೀಗಿವೆ: 1) ಬೆಂಗಳೂರು ವಿಭಾಗ (ಒಂಬತ್ತು ಜಿಲ್ಲೆಗಳು), 2) ಮೈಸೂರು ವಿಭಾಗ (ಎಂಟು ಜಿಲ್ಲೆಗಳು), 3) ಬೆಳಗಾವಿ ವಿಭಾಗ (ಏಳು ಜಿಲ್ಲೆಗಳು) ಮತ್ತು 4) ಕಲಬುರಗಿ ವಿಭಾಗ (ಆರು ಜಿಲ್ಲೆಗಳು).
*  ಒಟ್ಟು 30 ಜಿಲ್ಲೆಗಳು. ಪ್ರತಿ ಜಿಲ್ಲೆಗೆ ಒಬ್ಬರು ಜಿಲ್ಲಾಧಿಕಾರಿಗಳಿರುತ್ತಾರೆ (ಡೆಪ್ಯೂಟಿ ಕಮೀಷನರ್). ಅದೇ ರೀತಿಯಲ್ಲಿ ವಿಭಾಗಕ್ಕೆ ವಿಭಾಗೀಯ ಅಧಿಕಾರಿಯಿರುತ್ತಾರೆ (ಡಿವಿಜನಲ್ ಕಮೀಷನರ್).

1. ಬೆಂಗಳೂರು ವಿಭಾಗ
ಈ ವಿಭಾಗದಲ್ಲಿ 9 ಜಿಲ್ಲೆಗಳಿವೆ. ಅವುಗಳ ಹೆಸರುಗಳು ಹೀಗಿವೆ 1) ಬೆಂಗಳೂರು ನಗರ, 2) ಬೆಂಗಳೂರು ಗ್ರಾಮೀಣ, 3) ಕೋಲಾರ, 4) ಚಿಕ್ಕಬಳ್ಳಾಪುರ, 5) ರಾಮನಗರ, 6)ತುಮಕೂರು, 7) ಚಿತ್ರದುರ್ಗ, 8) ದಾವಣಗೆರೆ ಮತ್ತು 9) ಶಿವಮೊಗ್ಗ.

=> ಚಾರಿತ್ರಿಕ ಹಿನ್ನೆಲೆ :
*  ಈ ಭಾಗವನ್ನು ಮೊದಲು ಆಳಿದ ಅರಸರೆಂದರೆ ಕುವಲಾಲಪುರವನ್ನು (ಈಗಿನ ಕೋಲಾರ) ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಗಂಗರ ಮನೆತನದ ಅರಸರು.
*  ಗಂಗರ ಆಳ್ವಿಕೆ ಅಳಿದ ಮೇಲೆ ಈ ಪ್ರದೇಶವು ಚೋಳರ, ಹೊಯ್ಸಳರ, ವಿಜಯನಗರ, ಮರಾಠರ, ಮೈಸೂರು ಒಡೆಯರ ಮತ್ತು ವಿಜಯಪುರದ ಆದಿಲ್ಶಾಹಿ ಮನೆತನದ ಅರಸರ ಆಳ್ವಿಕೆಗೆ ಒಳಗಾಯಿತು.
* ವಿಜಯನಗರ ಅರಸರ ಆಳ್ವಿಕೆಯಲ್ಲಿ ಅವರು ಆಳುತ್ತಿದ್ದ ಪ್ರದೇಶವನ್ನು ಪಾಳೆಪಟ್ಟು ಎಂದು ಕರೆಯಲಾಗುತ್ತಿತ್ತು. ಈ ಪಾಳೆಗಾರರಿಗೆ ನಾಯಕರೆಂಬ ಹೆಸರಿತ್ತು.
*  ಈ ಪಾಳೆಗಾರರು ವಿಜಯನಗರ ಅರಸರಿಗೆ ವಿಧೇಯರಾಗಿದ್ದರು. ಅವರಿಗೆ ಪಾಳೆಗಾರರು ಕಪ್ಪ ಮತ್ತು ಕಾಣಿಕೆ ನೀಡುತ್ತಿದ್ದರು. ಪ್ರಮುಖ ಪಾಳೆಪಟ್ಟುಗಳೆಂದರೆ ಕೆಳದಿ, ಚಿತ್ರದುರ್ಗ, ಯಲಹಂಕ, ಚಿಕ್ಕಬಳ್ಳಾಪುರ ಮುಂತಾದವು.

=> ಪ್ರಾಕೃತಿಕ ಸಂಪನ್ಮೂಲ :
*  ಈ ವಿಭಾಗವು ಉಷ್ಣ ವಲಯದ ಮಾನ್ಸೂನ್ ವಾಯುಗುಣವನ್ನು ಹೊಂದಿದೆ.

ಅತಿ ಉಷ್ಣವಲಯದ ಜಿಲ್ಲೆ
ಕೋಲಾರ ಜಿಲ್ಲೆ,
ಅತಿ ಕಡಿಮೆ ಮಳೆ ಬೀಳುವ ಜಿಲ್ಲೆ
ಚಿತ್ರದುರ್ಗ
ಪಶ್ಚಿಮಟ್ಟದಲ್ಲಿ ಹುಟ್ಟುವ ಈ ವಲಯದ ಪ್ರಮುಖ ನದಿಗಳೆಂದರೆ
ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ವೇದಾವತಿ, ಶಿಂಷಾ, ತುಂಗಭದ್ರಾ, ಶರಾವತಿ, ವರದಾ- ಮುಂತಾದವು.
ಶರಾವತಿ ನದಿಯಿಂದ ವಿಶ್ವವಿಖ್ಯಾತ ಜೋಗಜಲಪಾತ ನಿರ್ಮಾಣ, ಅತಿಹೆಚ್ಚು ಮಳೆ ಬೀಳುವ ಪ್ರದೇಶ, ಗಾಜನೂರು ಮತ್ತು ತುಂಗಾ ಅಣೆಕಟ್ಟೆ
ಶಿವಮೊಗ್ಗ ಜಿಲ್ಲೆಯಲ್ಲಿವೆ.
ಮುತ್ಯಾಲಮಡು ಜಲಾಶಯ
ಬೆಂಗಳೂರು ನಗರ ಜಿಲ್ಲೆಯಲ್ಲಿದೆ.
ಮೈಸೂರು ಅರಸರು ಕಟ್ಟಿಸಿದ ವಾಣಿವಿಲಾಸ ಅಣೆಕಟ್ಟೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿದೆ.
ಮಾರ್ಕೋನಹಳ್ಳಿ ಜಲಾಶಯ
ತುಮಕೂರು
ಕೋಲಾರ ಚಿನ್ನದ ಗಣಿ
ಅಲ್ಲಿನ ಚಿನ್ನದ ಅದಿರು ಮುಗಿದು ಹೋಗಿದೆ.
ಕಬ್ಬಿಣದ ಅದಿರು ನಿಕ್ಷೇಪಗಳು
ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿವೆ.
ತಾಮ್ರದ ಗಣಿಗಳು ಮತ್ತು ಪರಮಾಣು ಶಕ್ತಿ ಉತ್ಪಾದನೆಗೆ ಅಗತ್ಯವಾದ ಖನಿಜವು
ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆಯುತ್ತದೆ

=> ಅರಣ್ಯಗಳು, ವನ್ಯಪ್ರಾಣಿಗಳು, ರಾಷ್ಟ್ರೀಯ ಉದ್ಯಾನಗಳು :
*  ಬೆಂಗಳೂರು ವಿಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ದಟ್ಟ ಅರಣ್ಯವಿದೆ.
*  ಬೆಂಗಳೂರು ನಗರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆ.
*  ಈ ವಿಭಾಗದ ಜಿಲ್ಲೆಗಳಲ್ಲಿ ನಿತ್ಯ ಹರಿದ್ವರ್ಣ ಅರಣ್ಯದಿಂದ ಎಲೆ ಉದುರುವ ಅರಣ್ಯದವರೆಗೆ ವಿವಿಧ ಬಗೆಯ ಅರಣ್ಯಗಳಿವೆ.
*  ಸಹ್ಯಾದ್ರಿ ಪರ್ವತ ಶ್ರೇಣಿಯು ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿ ಹಾದು ಹೋಗುತ್ತದೆ.
*  ಈ ವಿಭಾಗದಲ್ಲಿರುವ ಅತಿ ಎತ್ತರದ ಬೆಟ್ಟವೆಂದರೆ ಚಿತ್ರದುರ್ಗ ಜಿಲ್ಲೆಯಲ್ಲಿರುವ ಹಾಲುರಾಮೇಶ್ವರ ಗುಡ್ಡ.
 - ಇತರೆ ಪ್ರಸಿದ್ಧ ಗುಡ್ಡಗಳೆಂದರೆ ಕವಲೆದುರ್ಗ, ಚಂದ್ರಗುತ್ತಿ, ಕೊಡಚಾದ್ರಿ, ನಂದಿದುರ್ಗ ಇತ್ಯಾದಿ.
* ಬೆಂಗಳೂರು ವಿಭಾಗದಲ್ಲಿರುವ ಪ್ರಮುಖ ಧಾಮಗಳು ಹೀಗಿವೆ: 
ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯಧಾಮ, ಬೆಂಗಳೂರಿನ ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನವನ, ಶಿವಮೊಗ್ಗದ ಭದ್ರಾ ವನ್ಯಮೃಗ ಧಾಮ, ಶರಾವತಿ ವನ್ಯಮೃಗ ಧಾಮ, ಶೆಟ್ಟಿಹಳ್ಳಿ ವನ್ಯಮೃಗಧಾಮ, ಗುಡವಿ ಮತ್ತು ಮಂಡಗದ್ದೆ ಪಕ್ಷಿಧಾಮ, ತುಮಕೂರು ಜಿಲ್ಲೆಯ ಕಗ್ಗಲಡು ಪಕ್ಷಿಧಾಮ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ ರಾಮದೇವರಬೆಟ್ಟ ಮತ್ತು ರಾಮನಗರದ ರಣಹದ್ದು ಪಕ್ಷಿಧಾಮ ಇತ್ಯಾದಿ.

=> ಕೃಷಿ ಮತ್ತು ಉದ್ದಿಮೆಗಳ ಬೆಳವಣಿಗೆ :
*  ಶಿವಮೊಗ್ಗ ಜಿಲ್ಲೆಯಲ್ಲಿ ನೀರಾವರಿಯಿದೆ. ಈ ವಿಭಾಗದಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣು ಹೆಚ್ಚಾಗಿದೆ.
*  ಈ ವಿಭಾಗದ ಪ್ರಮುಖ ಬೆಳೆಗಳೆಂದರೆ ರಾಗಿ, ಮೆಕ್ಕೆ ಜೋಳ, ಭತ್ತ, ಕಡಲೆಕಾಯಿ, ಬೇಳೆಕಾಳು ಮುಂತಾದವು.
*  ರೇಷ್ಮೆ ಉದ್ಯಮಕ್ಕೆ ಮೂಲವಾದ ಹಿಪ್ಪುನೇರಳೆಯನ್ನು ಬೆಂಗಳೂರು ಜಿಲ್ಲೆ, ರಾಮನಗರ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಸಪೋಟ, ಪಪ್ಪಾಯ, ಹಲಸಿನಹಣ್ಣು, ಕಿತ್ತಲೆಹಣ್ಣು, ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ಬೆಳೆಯಲಾಗುತ್ತದೆ.
*  ಜನರು ಹೆಚ್ಚಾಗಿ ರಾಗಿ ಮುದ್ದೆ, ಮತ್ತು ಅಕ್ಕಿ ಬಳಸುತ್ತಾರೆ. ರಾಗಿ ಮತ್ತು ಅಕ್ಕಿ ರೊಟ್ಟಿಯನ್ನು ತಿನ್ನುತ್ತಾರೆ. ಇತ್ತೀಚಿಗೆ ಗೋಧಿ ಚಪಾತಿಯನ್ನು ಬಳಸುವುದನ್ನು ರೂಢಿಸಿಕೊಂಡಿದ್ದಾರೆ.
*  ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಸರ್ಕಾರ ಸ್ಥಾಪಿಸಿದೆ. ಅಲ್ಲಿ ರೈತರು ತಮ್ಮ ಸರಕುಗಳನ್ನು ಮಾರಾಟ ಮಾಡಬಹುದು.
*  ಸರ್ಕಾರವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉಗ್ರಾಣಗಳನ್ನು ನಿರ್ಮಿಸಿದೆ. ಅಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ದಾಸ್ತಾನಿಡಬಹುದು.
*  ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ನಿಯಮಿತ ಕಾರ್ಖಾನೆ) - 1923ರಲ್ಲಿ ಸ್ಥಾಪಿಸಲಾಗಿದೆ.
*  ಭದ್ರಾವತಿ ಕಾಗದದ ಕಾರ್ಖಾನೆ - ಇದನ್ನು 1936ರಲ್ಲಿ ಸ್ಥಾಪಿಸಲಾಗಿದೆ.
*  ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು ಭದ್ರಾವತಿಯಲ್ಲಿ ಸ್ಥಾಪನೆಗೊಂಡಿತು.
*  ತುಮಕೂರು ಜಿಲ್ಲೆಯ ಅಮ್ಮಸಂದ್ರದಲ್ಲಿ ಬಿರ್ಲಾ ಕಂಪನಿಯ ಸಿಮೆಂಟ್ ಕಾರ್ಖಾನೆಯಿದೆ.
*  ಬಟ್ಟೆ ರಫ್ತು ವ್ಯಾಪಾರದಲ್ಲಿ ದೇಶದಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ.
*  ದೊಡ್ಡಬಳ್ಳಾಪುರ, ಆನೇಕಲ್ ಮುಂತಾದ ನಗರಗಳಲ್ಲಿ ಸರ್ಕಾರ ಸಿದ್ಧ ಉಡುಪಿನ ಪಾರ್ಕುಗಳನ್ನು ಸ್ಥಾಪಿಸಿದೆ.

=> ಕಲೆ, ಸಾಹಿತ್ಯ, ಜಾನಪದ, ನಾಟಕ, ನೃತ್ಯ :
*  ಬೆಂಗಳೂರು ವಿಭಾಗದ ಮೂವರು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಅವರು ಯಾರೆಂದರೆ ರಾಷ್ಟ್ರಕವಿ ಕುವೆಂಪು (ಕೆ.ವಿ. ಪುಟ್ಟಪ್ಪ), ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ. ಯು.ಆರ್. ಅನಂತಮೂರ್ತಿ.
*  ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಗೆ ಸೇರಿದವರು.
*  ಗುಬ್ಬಿವೀರಣ್ಣ ಅವರಿಗೆ ನಾಟಕರತ್ನ, ನಾಟಕ ಸಾರ್ವಭೌಮ ಎಂಬ ಬಿರುದುಗಳು ಅವರಿಗಿದ್ದವು. ಅವರು ಸ್ಥಾಪಿಸಿದ ಗುಬ್ಬಿ ನಾಟಕ ಕಂಪನಿಯು ಶತಮಾನೋತ್ಸವವನ್ನು ಕಂಡಿದೆ.
*  ಸುಬ್ಬಯ್ಯ ನಾಯ್ಡು ಅವರು ಕನ್ನಡದ ಮೊದಲನೇ ವಾಕ್ಚಿತ್ರ ಕಸತಿ ಸುಲೋಚನಕಿದ ನಾಯಕ ನಟರು.
* ಕಲ್ಚರ್ಡ್ ಕಮೆಡಿಯನ್ ಎಂದು ಹೆಸರು ಮಾಡಿದ ಕೆ. ಹಿರಣ್ಣಯ್ಯ ಮತ್ತು ಅವಪುತ್ರ ಮಾಸ್ಟರ್ ಹಿರಣ್ಣಯ್ಯ ಅವರಂಗಭೂಮಿ ಕೊಡುಗೆ ಪ್ರಶಂಸನೀಯ.
* ಪ್ರಸಿದ್ಧ ನೃತ್ಯ ಕಲಾವಿದೆ ಬೆಂಗಳೂರಿನ ಶ್ರೀಮತಿ ಮಾಯಾರಾವ್ ರವರು ನೃತ್ಯ ಶಿಕ್ಷಣಕ್ಕಾಗಿ ನಾಟ್ಯ ಸರಸ್ವತಿ ಎಂಬ ಶಾಲೆಯನ್ನು ತೆರೆದು ಅನೇಕ ಕಲಾವಿದರಿಗೆ ನೃತ್ಯವನ್ನು ಹೇಳಿಕೊಟ್ಟಿದ್ದಾರೆ.
* ಪ್ರಸಿದ್ಧ ಜನಪದ ತಜ್ಞರಾದ ಸಾಹಿತಿ ಎಚ್.ಎಲ್. ನಾಗೇಗೌಡ ಅವರು ಸ್ಥಾಪಿಸಿರುವ ಜಾನಪದ ಲೋಕ ರಾಮನಗರ ಜಿಲ್ಲೆಯಲ್ಲಿದೆ. ಅದೊಂದು ಅದ್ಭುತ ಜಾನಪದ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ನಮ್ಮ ನಾಡಿಗೆ ಸೇರಿದ ವಿವಿಧ ಜನಪದ ಕಲೆ, ಸಾಹಿತ್ಯ, ನಾಟಕಗಳಿಗೆ ಸೇರಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.
* ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಕರಗ ಉತ್ಸವ ಒಂದು ಜನಪದ ಪ್ರಕಾರವಾಗಿದೆ.
* ದಕ್ಷಿಣ ಕರ್ನಾಟಕದಲ್ಲಿ ಪ್ರಸಿದ್ಧವಾದ ಸೋಮನ ಕುಣಿತ ಮತ್ತೊಂದು ಜಾನಪದ ಪ್ರದರ್ಶನ ಕಲೆಯಾಗಿದೆ.
* ಈ ವಿಭಾಗಕ್ಕೆ ವಿಶೇಷವಾದ ಜಾನಪದ ನಾಟಕವೆಂದರೆ ಮೂಡಲಪಾಯ ಯಕ್ಷಗಾನ. ಗಾರುಡಿ ಕುಣಿತ, ಡೊಳ್ಳು ಕುಣಿತ, ಕಂಸಾಲೆ ಕುಣಿತ ಮುಂತಾದವು ಜಾನಪದ ಕಲೆಗಳಾಗಿವೆ.
* ಚಿತ್ರಕಲೆಗೆ ಆರ್.ಎಸ್. ನಾಯ್ಡು, ರುಮಾಲೆ ಚನ್ನಬಸವಯ್ಯ, ವೆಂಕಟಪ್ಪ ಮುಂತಾದವರ ಕೊಡುಗೆ ಅನನ್ಯ.

-> ಶಿಕ್ಷಣ ಮತ್ತು ಆರೋಗ್ಯ :
* ಭಾರತ ರತ್ನ ಪ್ರಶಸ್ತಿ ಪಡೆದ ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಮತ್ತೊಬ್ಬರು ವಿಜ್ಞಾನಿ ಸಿ.ಎನ್.ಆರ್.ರಾವ್ ಇಬ್ಬರೂ ಕೋಲಾರ ಜಿಲ್ಲೆಗೆ ಸೇರಿದ್ದಾರೆ.
* ನೋಬಲ್ ಪ್ರಶಸ್ತಿ ಪಡೆದ ಸರ್. ಸಿ. ವಿ. ರಾಮನ್ ಅವರು ಬೆಂಗಳೂರಿನಲ್ಲಿ ಸಂಶೋಧನೆ ನಡೆಸಿದ್ದರು.
* ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ.
* ಸಿದ್ಧಗಂಗಾ ಮಠವು ಶ್ರೀ ಶಿವಕುಮಾರಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಬಡ ವಿದ್ಯಾಗಳಿಗೆ ಅಕ್ಷರ ಮತ್ತು ಅನ್ನ ದಾಸೋಹದ ಕಾರ್ಯ ನಡೆಸುತ್ತಿದೆ.
* ರಾಮನಗರ ಜಿಲ್ಲೆಯಲ್ಲಿ ಜನಿಸಿದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳೆದ ಆದಿಚುಂಚನಗಿರಿ ಮಠದ ಶೈಕ್ಷಣಿಕ ಸೇವೆಯು ಅಪೂರ್ವವಾಗಿದ್ದು ಮೂಲಶಿಕ್ಷಣ, ವೃತ್ತಿ ಶಿಕ್ಷಣದ ಕಾಲೇಜುಗಳನ್ನು ನಡೆಸುತ್ತಿದೆ.
* ಚಿತ್ರದುರ್ಗದ ಮುರುರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ.
* ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಉಪಕೇಂದ್ರಗಳು ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತವಾದ ಜಿಲ್ಲಾ ಆಸ್ಪತ್ರೆಗಳಿವೆ.
 * ದೊಡ್ಡ ದೊಡ್ಡ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ತಾಲ್ಲೂಕು ಆಸ್ಪತ್ರೆಗಳು ತಾಲ್ಲೂಕು ಕೇಂದ್ರಗಳಲ್ಲಿವೆ.
* ಸಂತಾನೋತ್ಪತ್ತಿ, ಆರೋಗ್ಯವನ್ನು ಉತ್ತಮ ಪಡಿಸುವುದಕ್ಕಾಗಿ ಸರ್ಕಾರವು ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24* 7 ಕೇಂದ್ರಗಳೆಂದು ೋಷಿಸಿದೆ.
* ಗ್ರಾಮೀಣ ಪ್ರದೇಶದಲ್ಲಿನ ಗರ್ಭಿಣಿಯರಿಗೆ ಸೇವೆ ಒದಗಿಸುವುದಕ್ಕಾಗಿ ಸಂಚಾರಿ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ.

-> ಸಾಂಸ್ಕೃತಿಕ ಸಂಪತ್ತು :
* ಕರ್ನಾಟಕ ಏಕೀಕರಣ ರೂವಾರಿ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ವಿಧಾನಸೌಧ ಕಟ್ಟಡ ನಿರ್ಮಾಣವಾಯಿತು.
* ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳವಳಿಗೆ ಅಡಿಪಾಯ ಹಾಕಿದವರು ಶಾಂತವೇರಿ ಗೋಪಾಲಗೌಡರು ಶಿವಮೊಗ್ಗ ಜಿಲ್ಲೆಯವರು.
* ಪರಿಸರ ಪೋಷಣೆಗೆ ಮತ್ತೊಂದು ಹೆಸರು ಸಾಲುಮರದ ತಿಮ್ಮಕ್ಕ. ನಮ್ಮ ದೇಶದ ಕ್ರಿಕೆಟ್ಗೆ ನಮ್ಮ ಕೊಡುಗೆ ಅನಿಲ್ ಕುಂಬ್ಳೆ. ಯೋಗ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಬಿ.ಕೆ.ಎಸ್. ಅಯ್ಯಂಗಾರ್ ಮತ್ತು ಮಲ್ಲಾಡಿಹಳ್ಳಿ ಶ್ರೀರಾವೇಂದ್ರ ಸ್ವಾಮೀಜಿ ಈ ವಿಭಾಗದವರು.

=> ಸ್ವಾತಂತ್ರ್ಯ ಹೋರಾಟಗಾರರು:
* ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ. ಸಿ. ರೆಡ್ಡಿ ಅವರು, ಎರಡನೆಯ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಸಮಾಜವಾದಿ ದುರೀಣ ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ತಿ.ತಾ. ಶರ್ಮ, ಭಾಗೀರಥಮ್ಮ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.
* ಕೆಂಗಲ್ ಹನುಮಂತಯ್ಯ ಮತ್ತು ಎಸ್. ನಿಜಲಿಂಗಪ್ಪ ಅವರು ಕರ್ನಾಟಕ ಏಕೀಕರಣದ ರೂವಾರಿಗಳೂ ಹೌದು. 

* ಈ ವಿಭಾಗದ ಜಿಲ್ಲೆಗಳ ವಿಶಿಷ್ಟತೆಗಳು :
ಈಗಾಗಲೇ ತಿಳಿಸಿರುವಂತೆ ಈ ವಿಭಾಗದಲ್ಲಿ 9 ಜಿಲ್ಲೆಗಳಿವೆ. ಪ್ರತಿಯೊಂದು ಜಿಲ್ಲೆಯು ತನ್ನದೇ ಆದ ವಿಶಿಷ್ಟತೆಯನ್ನು ಮೆರೆದಿದೆ. ಈ ವಿಭಾಗದ ದಾವಣಗೆರೆ (1997) ರಾಮನಗರ (2007) ಮತ್ತು ಚಿಕ್ಕಬಳ್ಳಾಪುರ (2007) ಹೊಸದಾಗಿ ರಚಿತವಾದ ಜಿಲ್ಲೆಗಳು. 
🌺Join  ಸ್ಪರ್ಧಾ ವಿಜಯ Telegram group
* link👉   https://t.me/joinchat/HKV6kEzAf95AUARPRIDXeA

Post a Comment

0 Comments