* ಬ್ರಿಟಿಷರ
ವಿರುದ್ಧ ನಡೆದ ಆರಂಭಿಕ ಪ್ರತಿಭಟನೆಗಳು :
-> ಆಂಗ್ಲೋ-ಮೈಸೂರು ಯುದ್ಧಗಳು - ಸಾ.ಶ 1767 ರಿಂದ 1799ರ
ವರೆಗೆ ನಡೆದವು.
->
ಆಂಗ್ಲೋ-ಮರಾಠ ಯುದ್ಧಗಳು - ಸಾ.ಶ 1775 ರಿಂದ 1818 ರವರೆಗೆ ನಡೆದವು.
->
ಸಾ.ಶ. 1800ರಲ್ಲಿ ದೊಂಡಿಯವಾಘ ದಂಗೆಯೆದ್ದಾಗ- ಅರ್ಥರ್ ವೆಲ್ಲೆಸ್ಲಿಯು ವಾಘನನ್ನು ಬಂಧಿಸಿ ಕೋನಗನ್ನಲ್ಲಿ
ಕೊಂದನು.
->
ಸಾ.ಶ 1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬ ಜಮೀನ್ದಾರನು ನಿಜಾಮನ ವಿರುದ್ಧ ದಂಗೆ.
->
ಸಾ.ಶ 1824ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ - ದಿವಾಕರ ದೀಕ್ಷಿತ ಮತ್ತು ಬಾಲಾಜಿ ದೇಶಪಾಂಡೆಯವರು
ಬ್ರಿಟಿಷರ ವಿರುದ್ಧ ದಂಗೆ ಎದ್ದು ಸ್ವತಃ ತಾವೇ ಕಂದಾಯ ಸಂಗ್ರಹಿಸಿದರು - ಬ್ರಿಟಿಷರು ಇದನ್ನು ತಡೆದು
ಇವರನ್ನು ಸೆರೆಮನೆಗೆ ತಳ್ಳಿದರು.
->
ಸಾ.ಶ 1824 ರಿಂದ 1830ರವರೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಮತ್ತು ನಿಷ್ಠಾವಂತ
ಸೇವಕ ಸಂಗೊಳ್ಳಿ ರಾಯಣ್ಣರು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರ ಸ್ವರ್ಗವನ್ನು ಕಂಡರು.
ಮುಂತಾದವು ಸಶಸ್ತ್ರ ಬಂಡಾಯದ ಪ್ರತಿಭಟನೆಗಳೆಂದು ಗುರುತಿಸಿಕೊಂಡಿವೆ.
->
ಬ್ರಿಟಿಷರು ಸಾ.ಶ. 1857ರ ಐತಿಹಾಸಿಕ ಘಟನೆಯನ್ನು 'ಸಿಪಾಯಿಗಳ ದಂಗೆ' ಎಂದು ಪರಿಗಣಿಸಿದರೆ, ಭಾರತೀಯ
ರಾಷ್ಟ್ರೀಯವಾದಿಗಳು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಸಾರಿದರು.
* ಕಾರಣಗಳು :
->
ಬ್ರಿಟಿಷರ ದೀರ್ಘಾವಧಿಯ ಆಡಳಿತದಿಂದ ಭಾರತದ ಆರ್ಥಿಕ ವ್ಯವಸ್ಥೆಯು ದುರ್ಬಲಗೊಂಡಿತ್ತು.
*
ಜನತೆಯು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ರೈತರು ತೆರಿಗೆಗಳ ಭಾರಕ್ಕೆ ಕುಸಿದಿದ್ದರು.
*
ಕರಕುಶಲ ಕೈಗಾರಿಕೆಗಳು ನಾಶವಾಗತೊಡಗಿ, ಪರಂಪರಾಗತವಾಗಿ ನಂಬಿಕೊಂಡು ಬಂದಿದ್ದ ವೃತ್ತಿಗಳು ಶಕ್ತಿಯನ್ನು
ಕಳೆದುಕೊಂಡು ಜನರು ಬೀದಿಪಾಲಾದರು.
1.
ರಾಜಕೀಯ ಕಾರಣಗಳು:
* ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿ & ಲಾರ್ಡ್
ಡಾಲ್ ಹೌಸಿಯ 'ದತ್ತುಮಕ್ಕಳಿಗೆ ಹಕ್ಕಿಲ್ಲ'ವೆಂಬ ನೀತಿಗಳಿಂದಾಗಿ ಅನೇಕ ಅರಸರು ಮತ್ತು ನವಾಬರು ಪದಚ್ಯುತಿಗೊಳ್ಳುವಂತಾಯಿತು.
* 'ದತ್ತುಮಕ್ಕಳಿಗೆ ಹಕ್ಕಿಲ್ಲ'ನೀತಿಗೆ ಬಲಿಯಾದ ರಾಜ್ಯಗಳೆಂದರೆ-
ಸತಾರ, ಜೈಪುರ, ಸಂಬಲ್ ಪುರ, ಉದಯಪುರ, ಝೂನ್ಸಿ, ಅವಧ್ ಮೊದಲಾದವು.
* ಕೆಲವು ರಾಜರ ವಿಶ್ರಾಂತಿ ವೇತನ ತಡೆಹಿಡಿಯಲಾಯಿತು.
* ರಾಜರ ಬಿರುದುಗಳು ರದ್ದಾದವು.
2.
ಆಡಳಿತಾತ್ಮಕ ಕಾರಣಗಳು :
*
ಎಲ್ಲಾ ನಾಗರಿಕ ಮತ್ತು ಸೈನಿಕ ಉನ್ನತ ಹುದ್ದೆಗಳು ಯುರೋಪಿಯನ್ ರಿಗೆ ಮೀಸಲಾಗಿದ್ದವು.
*
ಆಡಳಿತದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು.
*
ಕಾನೂನಿನ ಆಳ್ವಿಕೆಯಿಂದ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಕುಸಿತ
*
ನ್ಯಾಯಾಲಯದ ಇಂಗ್ಲಿಷ್ ಭಾಷೆಯು ಭಾರತೀಯ ಆಳುವ ವರ್ಗಕ್ಕೆ ಸರಿಹೊಂದಲಿಲ್ಲ.
3.
ಆರ್ಥಿಕ ಕಾರಣಗಳು :
*
ಬ್ರಿಟಿಷರ ವ್ಯಾಪಾರಿ ಹಿತಾಸಕ್ತಿಯಿಂದಾಗಿ ಭಾರತೀಯ ಗುಡಿ ಕೈಗಾರಿಕೆ ಮತ್ತು ಸ್ಥಳೀಯ ಕೈಗಾರಿಕೆಗಳು
ನಾಶ
*
ಅತ್ಯಂತ ಶೋಷಣಾತ್ಮಕವಾದ ಭೂಕಂದಾಯ ನೀತಿ
* ತಾಲ್ಲೂಕುದಾರರ ಮತ್ತು ಜಮೀನ್ದಾರರ ಸ್ಥಾನಮಾನ ಮತ್ತು ವರಮಾನದ ಮೂಲವನ್ನು ಕಿತ್ತುಕೊಳ್ಳಲಾಯಿತು.
*
ದೊಡ್ಡ ಪ್ರಮಾಣದ ಸಂಪತ್ತಿನ ಹೊರಹರಿವು ಸೃಷ್ಟಿಯಾಯಿತು.
*
ಅಂದಿನ ತೀವ್ರ ಬರಗಾಲಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು - ಇವೇ ಮುಂತಾದ ಅಂಶಗಳು ಭಾರತವನ್ನು
ಬಡತನಕ್ಕೆ ತಳ್ಳಿದವು.
4.
ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು :
*
ಬ್ರಿಟಿಷರು ಭಾರತೀಯರನ್ನು "ಸಂಸ್ಕೃತಿ ಮತ್ತು ನಾಗರಿಕತೆಯ ಗಂಧವಿಲ್ಲದ ಅನಾಗರಿಕರು",
'ಹಂದಿ', 'ಕರಿ ಮನುಷ್ಯರು ಎಂದು ಸಂಬೋಧಿಸುತ್ತಿದ್ದರು.
*
ಯೂರೋಪಿಯನ್ನರ ಮೇಲುಸ್ತುವಾರಿಯಲ್ಲಿದ್ದ ಹೊಟೇಲ್ ಮತ್ತು ಕ್ಲಬ್ ಗಳಲ್ಲಿ "ನಾಯಿಗಳಿಗೆ ಮತ್ತು
ಭಾರತೀಯರಿಗೆ ಪ್ರವೇಶವು ನಿಷಿದ್ಧ" ಎಂಬ ನಾಮಫಲಕಗಳನ್ನು ಹಾಕಿ ಭಾರತೀಯರಿಗೆ ಪ್ರವೇಶ ನಿಷೇಧಿಸಲಾಗಿತ್ತು.
* ಸತಿಪದ್ಧತಿ ಮತ್ತು ಬಾಲ್ಯವಿವಾಹ ನಿಷೇಧ, ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ ಇವುಗಳನ್ನು ಭಾರತೀಯರು ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಿಟಿಷರು ಮಾಡುತ್ತಿರುವ ಹಸ್ತಕ್ಷೇಪ ಎಂದು ಭಾವಿಸಿದರು.
* ಸತಿಪದ್ಧತಿ ಮತ್ತು ಬಾಲ್ಯವಿವಾಹ ನಿಷೇಧ, ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ ಇವುಗಳನ್ನು ಭಾರತೀಯರು ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಿಟಿಷರು ಮಾಡುತ್ತಿರುವ ಹಸ್ತಕ್ಷೇಪ ಎಂದು ಭಾವಿಸಿದರು.
*
ರೈಲ್ವೆಯ ಆಗಮನವು ಮಡಿವಂತ ಭಾರತೀಯರಿಗೆ ನುಂಗಲಾರದ ತುತ್ತಾಯಿತು - ಎಲ್ಲಾ ವರ್ಗದ ಜನರು ಒಂದೇ ಬೋಗಿಯಲ್ಲಿ
ಪ್ರಯಾಣ ಮಾಡಬೇಕಾದುದು ಮೇಲ್ವರ್ಗದವರಲ್ಲಿ ಸಿಟ್ಟು ತರಿಸಿತು.
5.
ಸೈನಿಕ ಕಾರಣಗಳು : ಲಾರ್ಡ್ ಕ್ಯಾನಿಂಗನ 'ಸಾಮಾನ್ಯ ಸೇನಾ ಸೇವಾ ಕಾಯಿದೆ'
*
ಸೈನಿಕರು ಪಾರಂಪರಿಕವಾಗಿ ಬಳಸುತ್ತಿದ್ದ ಧಾರ್ಮಿಕ ಚಿಹ್ನೆ ಮತ್ತು ಪೇಟಗಳ ನಿಷೇಧ
*
ಭಾರತೀಯ ಸೈನಿಕರಿಗೆ ಅತ್ಯಂತ ಕಡಿಮೆ ವೇತನ
* ಮುಂಬಡ್ತಿಯ ಅವಕಾಶಗಳು ಇಲ್ಲದಾಗಿದ್ದವು.
*
ಬ್ರಿಟಿಷ್ ಸೈನಿಕರಿಗೆ ಮಾತ್ರ ಹೆಚ್ಚಿನ ಸಂಬಳ ಮತ್ತು ಇತರೆ ಸೌಲಭ್ಯಗಳು
*
ಭಾರತೀಯ ಸೈನಿಕರನ್ನು ಕಾರ್ಯನಿಮಿತ್ತ ಅತ್ಯಂತ ದೂರದ ಪ್ರದೇಶಗಳಿಗೆ ಹೆಚ್ಚುವರಿ ವೇತನ ನೀಡದೆ ನಿಯೋಜಿಸಲಾಗುತ್ತಿತ್ತು.
*
ಲಾರ್ಡ್ ಕ್ಯಾನಿಂಗನ "ಸಾಮಾನ್ಯ ಸೇನಾಸೇವಾ ಕಾಯಿದೆ"ಯ ಪ್ರಕಾರ ಎಲ್ಲಾ ಸೈನಿಕರು ಬ್ರಿಟಿಷ್
ಆದೇಶದಂತೆ ಎಲ್ಲೆಂದರಲ್ಲಿ ಕಾರ್ಯನಿಮಿತ್ತ ತೆರಳಬೇಕಿತ್ತು. ಇವೆಲ್ಲವೂ ಭಾರತೀಯ ಸೈನಿಕರಲ್ಲಿ ಅಸಹನೆಯನ್ನು
ಉಂಟುಮಾಡಿದವು.
6.
ತಕ್ಷಣದ ಕಾರಣ :
*
ಸಾ.ಶ. 1857ರಲ್ಲಿ ಒಂದು ಹೊಸ ಮಾದರಿಯ ಎನ್ಫೀಲ್ಡ್ ರೈಫಲ್ ಬಂದೂಕುಗಳಿಗೆ ತೋಟಾ/ಕಾರ್ಟ್ರಿಡ್ಜ್ ಗಳನ್ನು
ತುಂಬುವ ಮುನ್ನ ಅದಕ್ಕೆ ಹೊದಿಸಿದ ಕಾಗದವನ್ನು ಹಲ್ಲಿನಿಂದ ಕಚ್ಚಿ ಹರಿಯಬೇಕಿತ್ತು. ಈ ಕಾಗದಕ್ಕೆ ಹಂದಿ
ಮತ್ತು ಗೋವಿನ ಕೊಬ್ಬು ಸವರಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಸೈನಿಕರಲ್ಲಿ ಹಬ್ಬಿ- ಇದು ಮುಸ್ಲಿಂ
ಮತ್ತು ಹಿಂದೂ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವುದಾಗಿತ್ತು. ಅವುಗಳನ್ನು ಬಳಸಲು
ನಿರಾಕರಿಸಿದ ಸೈನಿಕರು ಬ್ರಿಟಿಷರಿಂದ ಶಿಕ್ಷೆಗೊಳಗಾದರು.
ದಂಗೆಯ ಸ್ವರೂಪ :
->
1857ರ ಮೇ 10ರಂದು ಮೀರತ್ನಲ್ಲಿ ದಂಗೆ ಆರಂಭವಾಯಿತು.
->
ಮೀರತ್ನಲ್ಲಿ ದಂಗೆ ಸ್ಫೋಟಗೊಳ್ಳುವ ಮೊದಲೇ ಬಂಗಾಲದ ಬ್ಯಾರಕ್ ಪುರದ ಭಾರತೀಯ ಸಿಪಾಯಿ ಮಂಗಲ್ ಪಾಂಡೆ
ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ
ಗುಂಡಿಕ್ಕಿಕೊಂದನು. - ಆಗ ಮೀರತ್ನಲ್ಲಿ ಕಣ್ಣಿಗೆ ಬಿದ್ದ ಪ್ರತಿಯೊಬ್ಬ ಯೂರೋಪಿಯನ್ನರನ್ನು ಸಿಪಾಯಿಗಳು
ಕೊಂದರು.
->
ಉದ್ರಿಕ್ತರು 'ಮಾರೋ ಫರಂಗಿಕೋ' (ಯುರೋಪಿಯನರನ್ನು ಕೊಲ್ಲಿ) ಎಂದು ಕೂಗುತ್ತಾ ದಿಲ್ಲಿಯ ಕಡೆಗೆ ಧಾವಿಸಿದರು.
ದಿಲ್ಲಿಯಲ್ಲಿ ಸಿಪಾಯಿಗಳು ವಯೋವೃದ್ಧ ಹಾಗೂ ದುರ್ಬಲ ಮೊಗಲ್ ದೊರೆ 2ನೇ ಬಹಾದೂರ್ ಷಾನನ್ನು ಭಾರತದ
ಚಕ್ರವರ್ತಿ ಎಂದು ಘೋಷಣೆ ಮಾಡಿದರು.
->
ಪರ್ಷಿಯನ್ ಮೂಲದ ಫರಂಗಿ ಪದವನ್ನು ಉರ್ದು ಮತ್ತು ಹಿಂದಿಗಳಲ್ಲಿ ಯೂರೋಪಿಯನರನ್ನು ಕೀಳಾಗಿ ಸೂಚಿಸಲು
ಬಳಸಲಾಗುತ್ತಿತ್ತು.
->
ಕ್ರಾಂತಿಯ ಪ್ರಮುಖ ಕೇಂದ್ರಗಳೆಂದರೆ -ದಿಲ್ಲಿ, ಕಾನ್ಪುರ, ಲಕ್ನೋ, ಬರೇಲಿ, ಝಾನ್ಸಿ ಮತ್ತು ಬಿಹಾರದ
ಆರಾ ಇತ್ಯಾದಿ.
->
ದಿಲ್ಲಿಯಲ್ಲಿ – ಬಖ್ತ ಖಾನ್, ಕಾನ್ಪುರದಲ್ಲಿ-ನಾನಾ ಸಾಹೇಬ್ ಮತ್ತು ತಾಂತ್ಯಾ ಟೋಪೆ, ಲಕ್ನೋದಲ್ಲಿ-ಬೇಗಮ್
ಹಜ್ರತ್ ಮಹಲ್, ಝಾನ್ಸಿಯಲ್ಲಿ-ಲಕ್ಷ್ಮೀಬಾಯಿ ಮತ್ತು ಬಿಹಾರದಲ್ಲಿ-ಕುಂವರ್ ಸಿಂಗ್ ರವರ ನೇತೃತ್ವದಲ್ಲಿ
ದಂಗೆಗಳು ನಡೆದವು.
->
ಕರ್ನಾಟಕದಲ್ಲಿ - ಮುಂಡರಗಿ ಭೀಮರಾವ್, ಹಲಗಲಿ ಬೇಡರು, ಸುರಪುರದ 4ನೇ ವೆಂಕಟಪ್ಪ ನಾಯಕ ಮತ್ತು ನರಗುಂದದ
ಬಾಬಾಸಾಹೇಬ ಮುಖ್ಯ ನಾಯಕರಾಗಿದ್ದರು.
=> ಫಲಿತಾಂಶಗಳು
:
*
ದಂಗೆ ವಿಫಲಗೊಂಡರೂ ದೀರ್ಘಕಾಲೀನ ಪರಿಣಾಮಗಳನ್ನುಂಟುಮಾಡಿತು.
*
ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅಂತ್ಯಗೊಂಡು, ಭಾರತದ ಆಳ್ವಿಕೆಯನ್ನು ಬ್ರಿಟಿಷ್ ರಾಣಿ ವಿಕ್ಟೋರಿಯಾ
ವಹಿಸಿಕೊಂಡು, ಕಭಾರತೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸ್ಪಷ್ಟಪಡಿಸುವ
ಒಂದು 'ಘೋಷಣೆ' ಯನ್ನು ಹೊರಡಿಸಿದಳು.
*
ಆಧುನಿಕ ರಾಷ್ಟ್ರೀಯ ಚಳವಳಿಯ ಉದಯಕ್ಕೆ ನಾಂದಿ ಹಾಡಿತು ಮತ್ತು ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ
ನಿರಂತರ ಸ್ಫೂರ್ತಿಯಾಗಿ ಪರಿಣಮಿಸಿತು.
*
1857ರ ಮಹಾದಂಗೆಯ ಕುರಿತು ಪ್ರಮುಖ ಹೇಳಿಕೆಗಳು :
->
ಸಾ.ಶ. 1857ರ ಭಾರತೀಯರ ಹೋರಾಟವನ್ನು ಬ್ರಿಟಿಷ್ ಇತಿಹಾಸಕಾರರು ಕೇವಲ 'ಸಿಪಾಯಿಗಳ ದಂಗೆ' ಎಂದು ಪರಿಗಣಿಸಿದರು.
ಆದರೆ ಭಾರತದ ರಾಷ್ಟ್ರೀಯ ಇತಿಹಾಸಕಾರರು ಅದನ್ನು ಜನತೆಯ ಮಹಾನ್ ಬಂಡಾಯವೆಂದು ಸಾರಿ, `ಭಾರತದ ಪ್ರಥಮ
ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆದರು.
->
ಈ ಹೋರಾಟವನ್ನು ವಿನಾಯಕ ದಾಮೋದರ ಸಾವರ್ಕರ್ ರವರು 'ದೇಶದ ಸ್ವಾತಂತ್ರ್ಯಕ್ಕಾಗಿ
ನಡೆದ ಪ್ರಥಮ ಯುದ್ಧ' ವೆಂದು ಕರೆದವರಲ್ಲಿ ಮೊದಲಿಗರು.
->
ಪಟ್ಟಾಭಿ ಸೀತಾರಾಮಯ್ಯ ಅವರು 'ಭಾರತದ ಮೊದಲ ಸ್ವಾತಂತ್ರ್ಯ ಸಮರ
'ವೆಂದು ಕರೆದರು.
->
ಭಾರತದ ಇತಿಹಾಸದಲ್ಲಿ ಹೊಸ ರಾಜಕೀಯ ಪ್ರಜ್ಞೆಯನ್ನು ಸೃಷ್ಟಿಸಿತು. ಈ ಹೋರಾಟಗಳಲ್ಲಿ ಭಾಗವಹಿಸಿ ಹುತಾತ್ಮರಾದವರು
ಬಹುಬೇಗ ದೇಶದಲ್ಲಿ ಮನೆಮಾತಾದರು.
2 Comments
It is best information
ReplyDeleteThank you for you feedback.Plz keep in touch with our website, facebook page and group.😊
ReplyDelete