* ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - ಕಾರಣ & ಪರಿಣಾಮಗಳು


* ಬ್ರಿಟಿಷರ ವಿರುದ್ಧ ನಡೆದ ಆರಂಭಿಕ ಪ್ರತಿಭಟನೆಗಳು :
->  ಆಂಗ್ಲೋ-ಮೈಸೂರು ಯುದ್ಧಗಳು - ಸಾ.ಶ 1767 ರಿಂದ 1799ರ ವರೆಗೆ  ನಡೆದವು.
-> ಆಂಗ್ಲೋ-ಮರಾಠ ಯುದ್ಧಗಳು - ಸಾ.ಶ 1775 ರಿಂದ 1818 ರವರೆಗೆ ನಡೆದವು.
-> ಸಾ.ಶ. 1800ರಲ್ಲಿ ದೊಂಡಿಯವಾಘ ದಂಗೆಯೆದ್ದಾಗ- ಅರ್ಥರ್ ವೆಲ್ಲೆಸ್ಲಿಯು ವಾಘನನ್ನು ಬಂಧಿಸಿ ಕೋನಗನ್ನಲ್ಲಿ ಕೊಂದನು.
-> ಸಾ.ಶ 1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬ ಜಮೀನ್ದಾರನು ನಿಜಾಮನ ವಿರುದ್ಧ ದಂಗೆ.
-> ಸಾ.ಶ 1824ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ - ದಿವಾಕರ ದೀಕ್ಷಿತ ಮತ್ತು ಬಾಲಾಜಿ ದೇಶಪಾಂಡೆಯವರು ಬ್ರಿಟಿಷರ ವಿರುದ್ಧ ದಂಗೆ ಎದ್ದು ಸ್ವತಃ ತಾವೇ ಕಂದಾಯ ಸಂಗ್ರಹಿಸಿದರು - ಬ್ರಿಟಿಷರು ಇದನ್ನು ತಡೆದು ಇವರನ್ನು ಸೆರೆಮನೆಗೆ ತಳ್ಳಿದರು.
-> ಸಾ.ಶ 1824 ರಿಂದ 1830ರವರೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಮತ್ತು ನಿಷ್ಠಾವಂತ ಸೇವಕ ಸಂಗೊಳ್ಳಿ ರಾಯಣ್ಣರು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರ ಸ್ವರ್ಗವನ್ನು ಕಂಡರು. ಮುಂತಾದವು ಸಶಸ್ತ್ರ ಬಂಡಾಯದ ಪ್ರತಿಭಟನೆಗಳೆಂದು ಗುರುತಿಸಿಕೊಂಡಿವೆ. 
-> ಬ್ರಿಟಿಷರು ಸಾ.ಶ. 1857ರ ಐತಿಹಾಸಿಕ ಘಟನೆಯನ್ನು 'ಸಿಪಾಯಿಗಳ ದಂಗೆ' ಎಂದು ಪರಿಗಣಿಸಿದರೆ, ಭಾರತೀಯ ರಾಷ್ಟ್ರೀಯವಾದಿಗಳು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಸಾರಿದರು. 

* ಕಾರಣಗಳು :
-> ಬ್ರಿಟಿಷರ ದೀರ್ಘಾವಧಿಯ ಆಡಳಿತದಿಂದ ಭಾರತದ ಆರ್ಥಿಕ ವ್ಯವಸ್ಥೆಯು ದುರ್ಬಲಗೊಂಡಿತ್ತು.
* ಜನತೆಯು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ರೈತರು ತೆರಿಗೆಗಳ ಭಾರಕ್ಕೆ ಕುಸಿದಿದ್ದರು.
* ಕರಕುಶಲ ಕೈಗಾರಿಕೆಗಳು ನಾಶವಾಗತೊಡಗಿ, ಪರಂಪರಾಗತವಾಗಿ ನಂಬಿಕೊಂಡು ಬಂದಿದ್ದ ವೃತ್ತಿಗಳು ಶಕ್ತಿಯನ್ನು ಕಳೆದುಕೊಂಡು ಜನರು ಬೀದಿಪಾಲಾದರು.

1. ರಾಜಕೀಯ ಕಾರಣಗಳು:
* ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿ & ಲಾರ್ಡ್ ಡಾಲ್ ಹೌಸಿಯ 'ದತ್ತುಮಕ್ಕಳಿಗೆ ಹಕ್ಕಿಲ್ಲ'ವೆಂಬ ನೀತಿಗಳಿಂದಾಗಿ ಅನೇಕ ಅರಸರು ಮತ್ತು ನವಾಬರು ಪದಚ್ಯುತಿಗೊಳ್ಳುವಂತಾಯಿತು.
* 'ದತ್ತುಮಕ್ಕಳಿಗೆ ಹಕ್ಕಿಲ್ಲ'ನೀತಿಗೆ ಬಲಿಯಾದ ರಾಜ್ಯಗಳೆಂದರೆ- ಸತಾರ, ಜೈಪುರ, ಸಂಬಲ್ ಪುರ, ಉದಯಪುರ, ಝೂನ್ಸಿ, ಅವಧ್ ಮೊದಲಾದವು.
* ಕೆಲವು ರಾಜರ ವಿಶ್ರಾಂತಿ ವೇತನ ತಡೆಹಿಡಿಯಲಾಯಿತು.
* ರಾಜರ ಬಿರುದುಗಳು ರದ್ದಾದವು.

2. ಆಡಳಿತಾತ್ಮಕ ಕಾರಣಗಳು :
* ಎಲ್ಲಾ ನಾಗರಿಕ ಮತ್ತು ಸೈನಿಕ ಉನ್ನತ ಹುದ್ದೆಗಳು ಯುರೋಪಿಯನ್ ರಿಗೆ ಮೀಸಲಾಗಿದ್ದವು.
* ಆಡಳಿತದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು.
* ಕಾನೂನಿನ ಆಳ್ವಿಕೆಯಿಂದ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಕುಸಿತ
* ನ್ಯಾಯಾಲಯದ ಇಂಗ್ಲಿಷ್ ಭಾಷೆಯು ಭಾರತೀಯ ಆಳುವ ವರ್ಗಕ್ಕೆ ಸರಿಹೊಂದಲಿಲ್ಲ.


3. ಆರ್ಥಿಕ ಕಾರಣಗಳು :
* ಬ್ರಿಟಿಷರ ವ್ಯಾಪಾರಿ ಹಿತಾಸಕ್ತಿಯಿಂದಾಗಿ ಭಾರತೀಯ ಗುಡಿ ಕೈಗಾರಿಕೆ ಮತ್ತು ಸ್ಥಳೀಯ ಕೈಗಾರಿಕೆಗಳು ನಾಶ
* ಅತ್ಯಂತ ಶೋಷಣಾತ್ಮಕವಾದ ಭೂಕಂದಾಯ ನೀತಿ
* ತಾಲ್ಲೂಕುದಾರರ ಮತ್ತು ಜಮೀನ್ದಾರರ ಸ್ಥಾನಮಾನ ಮತ್ತು ವರಮಾನದ ಮೂಲವನ್ನು ಕಿತ್ತುಕೊಳ್ಳಲಾಯಿತು.
* ದೊಡ್ಡ ಪ್ರಮಾಣದ ಸಂಪತ್ತಿನ ಹೊರಹರಿವು ಸೃಷ್ಟಿಯಾಯಿತು.
* ಅಂದಿನ ತೀವ್ರ ಬರಗಾಲಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು - ಇವೇ ಮುಂತಾದ ಅಂಶಗಳು ಭಾರತವನ್ನು ಬಡತನಕ್ಕೆ ತಳ್ಳಿದವು.


4. ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು :
* ಬ್ರಿಟಿಷರು ಭಾರತೀಯರನ್ನು "ಸಂಸ್ಕೃತಿ ಮತ್ತು ನಾಗರಿಕತೆಯ ಗಂಧವಿಲ್ಲದ ಅನಾಗರಿಕರು", 'ಹಂದಿ', 'ಕರಿ ಮನುಷ್ಯರು ಎಂದು ಸಂಬೋಧಿಸುತ್ತಿದ್ದರು.
* ಯೂರೋಪಿಯನ್ನರ ಮೇಲುಸ್ತುವಾರಿಯಲ್ಲಿದ್ದ ಹೊಟೇಲ್ ಮತ್ತು ಕ್ಲಬ್ ಗಳಲ್ಲಿ "ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವು ನಿಷಿದ್ಧ" ಎಂಬ ನಾಮಫಲಕಗಳನ್ನು ಹಾಕಿ ಭಾರತೀಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. 
* ಸತಿಪದ್ಧತಿ ಮತ್ತು ಬಾಲ್ಯವಿವಾಹ ನಿಷೇಧ, ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ ಇವುಗಳನ್ನು ಭಾರತೀಯರು ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಿಟಿಷರು ಮಾಡುತ್ತಿರುವ ಹಸ್ತಕ್ಷೇಪ ಎಂದು ಭಾವಿಸಿದರು.
* ರೈಲ್ವೆಯ ಆಗಮನವು ಮಡಿವಂತ ಭಾರತೀಯರಿಗೆ ನುಂಗಲಾರದ ತುತ್ತಾಯಿತು - ಎಲ್ಲಾ ವರ್ಗದ ಜನರು ಒಂದೇ ಬೋಗಿಯಲ್ಲಿ ಪ್ರಯಾಣ ಮಾಡಬೇಕಾದುದು ಮೇಲ್ವರ್ಗದವರಲ್ಲಿ ಸಿಟ್ಟು ತರಿಸಿತು.


5. ಸೈನಿಕ ಕಾರಣಗಳು : ಲಾರ್ಡ್ ಕ್ಯಾನಿಂಗನ 'ಸಾಮಾನ್ಯ ಸೇನಾ ಸೇವಾ ಕಾಯಿದೆ'
* ಸೈನಿಕರು ಪಾರಂಪರಿಕವಾಗಿ ಬಳಸುತ್ತಿದ್ದ ಧಾರ್ಮಿಕ ಚಿಹ್ನೆ ಮತ್ತು ಪೇಟಗಳ ನಿಷೇಧ
* ಭಾರತೀಯ ಸೈನಿಕರಿಗೆ ಅತ್ಯಂತ ಕಡಿಮೆ ವೇತನ
*  ಮುಂಬಡ್ತಿಯ ಅವಕಾಶಗಳು ಇಲ್ಲದಾಗಿದ್ದವು.
* ಬ್ರಿಟಿಷ್ ಸೈನಿಕರಿಗೆ ಮಾತ್ರ ಹೆಚ್ಚಿನ ಸಂಬಳ ಮತ್ತು ಇತರೆ ಸೌಲಭ್ಯಗಳು
* ಭಾರತೀಯ ಸೈನಿಕರನ್ನು ಕಾರ್ಯನಿಮಿತ್ತ ಅತ್ಯಂತ ದೂರದ ಪ್ರದೇಶಗಳಿಗೆ ಹೆಚ್ಚುವರಿ ವೇತನ ನೀಡದೆ ನಿಯೋಜಿಸಲಾಗುತ್ತಿತ್ತು.
* ಲಾರ್ಡ್ ಕ್ಯಾನಿಂಗನ "ಸಾಮಾನ್ಯ ಸೇನಾಸೇವಾ ಕಾಯಿದೆ"ಯ ಪ್ರಕಾರ ಎಲ್ಲಾ ಸೈನಿಕರು ಬ್ರಿಟಿಷ್ ಆದೇಶದಂತೆ ಎಲ್ಲೆಂದರಲ್ಲಿ ಕಾರ್ಯನಿಮಿತ್ತ ತೆರಳಬೇಕಿತ್ತು. ಇವೆಲ್ಲವೂ ಭಾರತೀಯ ಸೈನಿಕರಲ್ಲಿ ಅಸಹನೆಯನ್ನು ಉಂಟುಮಾಡಿದವು.


6. ತಕ್ಷಣದ ಕಾರಣ :
* ಸಾ.ಶ. 1857ರಲ್ಲಿ ಒಂದು ಹೊಸ ಮಾದರಿಯ ಎನ್ಫೀಲ್ಡ್ ರೈಫಲ್ ಬಂದೂಕುಗಳಿಗೆ ತೋಟಾ/ಕಾರ್ಟ್ರಿಡ್ಜ್ ಗಳನ್ನು ತುಂಬುವ ಮುನ್ನ ಅದಕ್ಕೆ ಹೊದಿಸಿದ ಕಾಗದವನ್ನು ಹಲ್ಲಿನಿಂದ ಕಚ್ಚಿ ಹರಿಯಬೇಕಿತ್ತು. ಈ ಕಾಗದಕ್ಕೆ ಹಂದಿ ಮತ್ತು ಗೋವಿನ ಕೊಬ್ಬು ಸವರಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಸೈನಿಕರಲ್ಲಿ ಹಬ್ಬಿ- ಇದು ಮುಸ್ಲಿಂ ಮತ್ತು ಹಿಂದೂ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವುದಾಗಿತ್ತು. ಅವುಗಳನ್ನು ಬಳಸಲು ನಿರಾಕರಿಸಿದ ಸೈನಿಕರು ಬ್ರಿಟಿಷರಿಂದ ಶಿಕ್ಷೆಗೊಳಗಾದರು.


ದಂಗೆಯ ಸ್ವರೂಪ :
-> 1857ರ ಮೇ 10ರಂದು ಮೀರತ್ನಲ್ಲಿ ದಂಗೆ ಆರಂಭವಾಯಿತು.
-> ಮೀರತ್ನಲ್ಲಿ ದಂಗೆ ಸ್ಫೋಟಗೊಳ್ಳುವ ಮೊದಲೇ ಬಂಗಾಲದ ಬ್ಯಾರಕ್ ಪುರದ ಭಾರತೀಯ ಸಿಪಾಯಿ ಮಂಗಲ್ ಪಾಂಡೆ ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿಕೊಂದನು. - ಆಗ ಮೀರತ್ನಲ್ಲಿ ಕಣ್ಣಿಗೆ ಬಿದ್ದ ಪ್ರತಿಯೊಬ್ಬ ಯೂರೋಪಿಯನ್ನರನ್ನು ಸಿಪಾಯಿಗಳು ಕೊಂದರು.
-> ಉದ್ರಿಕ್ತರು 'ಮಾರೋ ಫರಂಗಿಕೋ' (ಯುರೋಪಿಯನರನ್ನು ಕೊಲ್ಲಿ) ಎಂದು ಕೂಗುತ್ತಾ ದಿಲ್ಲಿಯ ಕಡೆಗೆ ಧಾವಿಸಿದರು. ದಿಲ್ಲಿಯಲ್ಲಿ ಸಿಪಾಯಿಗಳು ವಯೋವೃದ್ಧ ಹಾಗೂ ದುರ್ಬಲ ಮೊಗಲ್ ದೊರೆ 2ನೇ ಬಹಾದೂರ್ ಷಾನನ್ನು ಭಾರತದ ಚಕ್ರವರ್ತಿ ಎಂದು ಘೋಷಣೆ ಮಾಡಿದರು.
-> ಪರ್ಷಿಯನ್ ಮೂಲದ ಫರಂಗಿ ಪದವನ್ನು ಉರ್ದು ಮತ್ತು ಹಿಂದಿಗಳಲ್ಲಿ ಯೂರೋಪಿಯನರನ್ನು ಕೀಳಾಗಿ ಸೂಚಿಸಲು ಬಳಸಲಾಗುತ್ತಿತ್ತು.
-> ಕ್ರಾಂತಿಯ ಪ್ರಮುಖ ಕೇಂದ್ರಗಳೆಂದರೆ -ದಿಲ್ಲಿ, ಕಾನ್ಪುರ, ಲಕ್ನೋ, ಬರೇಲಿ, ಝಾನ್ಸಿ ಮತ್ತು ಬಿಹಾರದ ಆರಾ ಇತ್ಯಾದಿ.
-> ದಿಲ್ಲಿಯಲ್ಲಿ – ಬಖ್ತ ಖಾನ್, ಕಾನ್ಪುರದಲ್ಲಿ-ನಾನಾ ಸಾಹೇಬ್ ಮತ್ತು ತಾಂತ್ಯಾ ಟೋಪೆ, ಲಕ್ನೋದಲ್ಲಿ-ಬೇಗಮ್ ಹಜ್ರತ್ ಮಹಲ್, ಝಾನ್ಸಿಯಲ್ಲಿ-ಲಕ್ಷ್ಮೀಬಾಯಿ ಮತ್ತು ಬಿಹಾರದಲ್ಲಿ-ಕುಂವರ್ ಸಿಂಗ್ ರವರ ನೇತೃತ್ವದಲ್ಲಿ ದಂಗೆಗಳು ನಡೆದವು.
-> ಕರ್ನಾಟಕದಲ್ಲಿ - ಮುಂಡರಗಿ ಭೀಮರಾವ್, ಹಲಗಲಿ ಬೇಡರು, ಸುರಪುರದ 4ನೇ ವೆಂಕಟಪ್ಪ ನಾಯಕ ಮತ್ತು ನರಗುಂದದ ಬಾಬಾಸಾಹೇಬ ಮುಖ್ಯ ನಾಯಕರಾಗಿದ್ದರು. 


=> ಫಲಿತಾಂಶಗಳು :
* ದಂಗೆ ವಿಫಲಗೊಂಡರೂ ದೀರ್ಘಕಾಲೀನ ಪರಿಣಾಮಗಳನ್ನುಂಟುಮಾಡಿತು.
* ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅಂತ್ಯಗೊಂಡು, ಭಾರತದ ಆಳ್ವಿಕೆಯನ್ನು ಬ್ರಿಟಿಷ್ ರಾಣಿ ವಿಕ್ಟೋರಿಯಾ ವಹಿಸಿಕೊಂಡು, ಕಭಾರತೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸ್ಪಷ್ಟಪಡಿಸುವ ಒಂದು 'ಘೋಷಣೆ' ಯನ್ನು ಹೊರಡಿಸಿದಳು.
* ಆಧುನಿಕ ರಾಷ್ಟ್ರೀಯ ಚಳವಳಿಯ ಉದಯಕ್ಕೆ ನಾಂದಿ ಹಾಡಿತು ಮತ್ತು ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ನಿರಂತರ ಸ್ಫೂರ್ತಿಯಾಗಿ ಪರಿಣಮಿಸಿತು.

* 1857ರ ಮಹಾದಂಗೆಯ ಕುರಿತು ಪ್ರಮುಖ ಹೇಳಿಕೆಗಳು :
-> ಸಾ.ಶ. 1857ರ ಭಾರತೀಯರ ಹೋರಾಟವನ್ನು ಬ್ರಿಟಿಷ್ ಇತಿಹಾಸಕಾರರು ಕೇವಲ 'ಸಿಪಾಯಿಗಳ ದಂಗೆ' ಎಂದು ಪರಿಗಣಿಸಿದರು. ಆದರೆ ಭಾರತದ ರಾಷ್ಟ್ರೀಯ ಇತಿಹಾಸಕಾರರು ಅದನ್ನು ಜನತೆಯ ಮಹಾನ್ ಬಂಡಾಯವೆಂದು ಸಾರಿ, `ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆದರು.
-> ಈ ಹೋರಾಟವನ್ನು ವಿನಾಯಕ ದಾಮೋದರ ಸಾವರ್ಕರ್ ರವರು 'ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಪ್ರಥಮ ಯುದ್ಧ' ವೆಂದು ಕರೆದವರಲ್ಲಿ ಮೊದಲಿಗರು.
-> ಪಟ್ಟಾಭಿ ಸೀತಾರಾಮಯ್ಯ ಅವರು 'ಭಾರತದ ಮೊದಲ ಸ್ವಾತಂತ್ರ್ಯ ಸಮರ 'ವೆಂದು ಕರೆದರು.

-> ಭಾರತದ ಇತಿಹಾಸದಲ್ಲಿ ಹೊಸ ರಾಜಕೀಯ ಪ್ರಜ್ಞೆಯನ್ನು ಸೃಷ್ಟಿಸಿತು. ಈ ಹೋರಾಟಗಳಲ್ಲಿ ಭಾಗವಹಿಸಿ ಹುತಾತ್ಮರಾದವರು ಬಹುಬೇಗ ದೇಶದಲ್ಲಿ ಮನೆಮಾತಾದರು.
 

Post a Comment

2 Comments

  1. It is best information

    ReplyDelete
  2. Thank you for you feedback.Plz keep in touch with our website, facebook page and group.😊

    ReplyDelete