● ಬಾದಾಮಿ ಚಾಲುಕ್ಯರು - ಇಮ್ಮಡಿ ಪುಲಿಕೇಶಿ



* ಬಾದಾಮಿ ಚಾಲುಕ್ಯ ವಂಶದ ಸ್ಥಾಪಕ-ರಾಜಾ ಜಯಸಿಂಹ
* ರಾಜಧಾನಿ- ಬಾದಾಮಿ/ವಾತಾಪಿ
* ರಾಜ ಲಾಂಛನ - ವರಾಹ
* ಪ್ರಸಿದ್ಧ ದೊರೆ - ಇಮ್ಮಡಿ ಪುಲಿಕೇಶಿ.

-> ಇಮ್ಮಡಿ ಪುಲಿಕೇಶಿ :

* ಬಿರುದುಗಳು: ಪರಮೇಶ್ವರ, ದಕ್ಷಿಣಪಥೇಶ್ವರ, ತ್ರಿಸಾಗರಗಳಿಂದಾವೃತವಾದ ಪ್ರದೇಶದ ಅಧಿಪತಿ.

 -> ಸಾಧನೆಗಳು :
* ಜನ್ಮದತ್ತವಾಗಿ ಬರಬೇಕಾಗಿದ್ದ ತಂದೆಯ ರಾಜ್ಯವನ್ನು ಚಿಕ್ಕಪ್ಪನಾದ ಮಂಗಳೇಶನಿಂದ ಯುದ್ಧದ ಮೂಲಕ ಕಸಿದುಕೊಂಡನು.
* ಪೂರ್ವದಲ್ಲಿ ವೆಂಗಿ, ಕಳಿಂಗ, ಕೋಸಲದ ರಾಜರು, ಕದಂಬರು ಮತ್ತು ಗಂಗರು ಶರಣಾದರು.
* ಸಾಮಂತರಾಗಿದ್ದ ರಾಷ್ಟ್ರಕೂಟರ ದಂಗೆಯನ್ನಡಗಿಸಿ, ದಕ್ಷಿಣದಲ್ಲಿ ಕಂಚಿಯ ಪಲ್ಲವರ ದೊರೆ ಮಹೇಂದ್ರ ವರ್ಮನನ್ನು ಮತ್ತು ಉತ್ತರದ ಲಾಟ, ಮಾಳ್ವ, ಗೂರ್ಜರನ್ನು ಸೋಲಿಸಿ ಗುಜರಾತಿನವರೆಗೆ ಮುನ್ನಡೆದನು.
* ಕಾವೇರಿ ನದಿಯನ್ನು ದಾಟಿ ಚೋಳ, ಕೇರಳ ಮತ್ತು ಪಾಂಡ್ಯರನ್ನು ಒಲಿಸಿಕೊಂಡನು. 
* ನರ್ಮದಾನದಿ ಕದನ: ಉತ್ತರ ಪಥೇಶ್ವರನಾದ ಹರ್ಷವರ್ಧನನನ್ನು ಪುಲಿಕೇಶಿಯು ನರ್ಮದಾ ನದಿ ತೀರದಲ್ಲಿ ನಡೆದ ಘೋರ ಯುದ್ಧದಲ್ಲಿ ಸೋಲಿಸಿ - ಪರಮೇಶ್ವರ, ದಕ್ಷಿಣಪಥೇಶ್ವರ ಎಂಬ ಬಿರುದುಗಳನ್ನು ಹೊಂದಿದನು. - ಪುಲಿಕೇಶಿಯ ರಾಜ್ಯವು ಅರಬ್ಬೀ ಸಮುದ್ರದಿಂದ ಬಂಗಾಳಕೊಲ್ಲಿಯವರೆಗೂ ಹಬ್ಬಿತ್ತು.
* ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನನನ್ನು-ವೆಂಗಿ ಮತ್ತು ಜಯಸಿಂಹನನ್ನು-ಗುಜರಾತ್ ಪ್ರಾಂತ್ಯದ ಅಧಿಕಾರಿಗಳನ್ನಾಗಿ ನೇಮಿಸಿದನು.
* ಮುಂದಿನ ವರ್ಷಗಳಲ್ಲಿ ಇದು - ವೆಂಗಿಯ ಚಾಳುಕ್ಯರು ಎನ್ನುವ ಹೆಸರಿನಲ್ಲಿ ಸುಮಾರು 5 ಶತಮಾನಗಳ ಕಾಲ ರಾಜ್ಯಭಾರ ನಡೆಸಿತು.
* ಹ್ಯೂಯೆನ್ ತ್ಸಾಂಗ ನು ಚಾಳುಕ್ಯ ರಾಜಧಾನಿಗೆ ಭೇಟಿ ನೀಡಿದ್ದನು.
* ಪರ್ಶಿಯನ್ ದೊರೆಯಾದ ಇಮ್ಮಡಿ ಖುಸ್ರುವಿನೊಡನೆ ಇಮ್ಮಡಿ ಪುಲಿಕೇಶಿಯು ರಾಯಭಾರಿ ಸಂಬಂಧಗಳನ್ನು ಹೊಂದಿದ್ದನೆಂದು-ಅರಬ್ ಇತಿಹಾಸಕಾರರು ತಿಳಿಸುತ್ತಾರೆ. ಈ ಬಗ್ಗೆ ಅಜಂತಾದ 1ನೇ ಗುಹೆಯಲ್ಲಿ ಪುಲಿಕೇಶಿಯು ಖುಸ್ರುವಿನ ರಾಯಭಾರಿಯನ್ನು ಸ್ವಾಗತಿಸುತ್ತಿರುವ ವರ್ಣಚಿತ್ರವಿದೆ. 
* ಪಲ್ಲವ ದೊರೆ 1ನೇ ನರಸಿಂಹವರ್ಮನು ತನ್ನ ತಂದೆ ಮಹೇಂದ್ರವರ್ಮನಿಗೆ ಉಂಟಾದ ಸೋಲಿಗೆ-ಚಾಳುಕ್ಯ ರಾಜ್ಯವನ್ನು ಆಕ್ರಮಿಸಿ, ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ, ವಾತಾಪಿಯನ್ನು ವಶಪಡಿಸಿಕೊಂಡು ಸೇಡು ತೀರಿಸಿಕೊಂಡನು.
* ಚಾಲುಕ್ಯರ ಕೊನೆಯ ದೊರೆ-ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರು ಈ ಸಾಮ್ರಾಜ್ಯವನ್ನು ಆಕ್ರಮಿಸಿದರು.

-> ಚಾಳುಕ್ಯರ ಕೊಡುಗೆಗಳು :
* ಈ ದೇಶಕ್ಕೆ ಕರ್ನಾಟಕ ಎಂಬ ಹೆಸರು ಕೊಟ್ಟವರು-ಬಾದಾಮಿ ಚಾಲುಕ್ಯರು.
* ವಿಷಯ/ಜಿಲ್ಲೆಯ ಅಧಿಕಾರಿ-ವಿಷಯಾಧಿಪತಿ.
->ಸಾಹಿತ್ಯ:
* ಕನ್ನಡವು ಬಾದಾಮಿ ಚಾಲುಕ್ಯರ ದೇಶ ಭಾಷೆಯಾಗಿತ್ತು.
* ಕಾವ್ಯದಲ್ಲಿ ತ್ರಿಪದಿ ಶೈಲಿ ಬೆಳವಣಿಗೆ - ಈ ಕಾಲದ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ - ಒಂದು ಪದ್ಯವು ತ್ರಿಪದಿ ಶೈಲಿಯಲ್ಲಿದೆ.
*ಸಂಸ್ಕೃತ ವಿದ್ವಾಂಸರು-ರವಿಕೀರ್ತಿ, ವಿಜ್ಜಿಕ ಮತ್ತು ಅಕಳಂಕರು.
* ಸಂಸ್ಕೃತ ನಾಟಕಗಳು : ಇಮ್ಮಡಿ ಪುಲಿಕೇಶಿಯ ಸೊಸೆ-ಕವಿಯತ್ರಿ ವಿಜ್ಜಿಕೆ ಬರೆದ-ಕೌಮುದೀ ಮಹೋತ್ಸವ ಮತ್ತು ಶಿವಭಟ್ಟಾರಕನ-ಹರ ಪಾರ್ವತೀಯ.

-> ವಾಸ್ತುಶಿಲ್ಪ ಮತ್ತು ಶಿಲ್ಪಕಲೆ :
* ಬಾದಾಮಿ ಚಾಲುಕ್ಯರು ಭಾರತೀಯ ವಾಸ್ತುಶಿಲ್ಪದಲ್ಲಿ-ಚಾಳುಕ್ಯ ಶೈಲಿ ಎಂಬ ವಿಶಿಷ್ಟ ಶಿಲ್ಪಕಲಾ ಶೈಲಿಯನ್ನು ಪ್ರಾರಂಭಿಸಿದರು.
* ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಮಹಾಕೂಟಗಳು ಬಾದಾಮಿ ಚಾಲುಕ್ಯರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳಾಗಿವೆ.
* ಬಾದಾಮಿ, ಐಹೊಳೆಗಳಲ್ಲಿ ಗುಹಾಲಯಗಳಿವೆ.
* ಬಾದಾಮಿಯ ಗುಹಾಲಯದಲ್ಲಿ ವರಾಹ, ಹರಿಹರ, ನಟರಾಜ, ಅರ್ಧನಾರೀಶ್ವರರ ವಿಗ್ರಹಗಳು & ಶೇಷನಾಗನ ಮೇಲೆ ಆಸೀನನಾಗಿರುವ ವಿಷ್ಣುವಿನ ಮೂರ್ತಿಗಳಿವೆ.
* 'ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು' ಐಹೊಳೆಯಲ್ಲಿ- ಲಾಡಖಾನ್, ಮೇಗುತಿ ಮತ್ತು ಹುಚ್ಚಿಮಲ್ಲಿ ದೇವಾಲಯಗಳಿವೆ.
* ಅತ್ಯಂತ ಹಳೆಯ ದೇವಾಲಯ- ಲಾಡಖಾನ್/ಸೂರ್ಯ/ಶಿವ ದೇವಾಲಯ/ದುರ್ಗದ ದೇವಾಲಯ. * ದೇವಾಲಯ ವಾಸ್ತುಶಿಲ್ಪದ ಕ್ರಮಸರಣಿಯ ವಿಕಾಸದಲ್ಲಿನ ಪ್ರಯೋಗಗಳನ್ನು-ಐಹೊಳೆಯಲ್ಲಿ ನಡೆಸಲಾಯಿತು.
* ಪಟ್ಟದಕಲ್ಲಿನಲ್ಲಿ - ಚಾಲುಕ್ಯ ಶೈಲಿಯು ಸಂಪೂರ್ಣ ವಿಕಾಸ ಹೊಂದಿತು. ದೊಡ್ಡದಾದ ವಿರೂಪಾಕ್ಷ/ಲೋಕೇಶ್ವರ ದೇವಾಲಯ & ತ್ರೈಲೋಕೇಶ್ವರ/ಮಲ್ಲಿಕಾರ್ಜುನ ದೇವಾಲಯಗಳಿವೆ.
* ವಿಶ್ವ ಪರಂಪರೆಯ ತಾಣದ ಪಟ್ಟಿಗೆ ಸೇರಿದ ಪಟ್ಟದಕಲ್ಲಿನಲ್ಲಿ ಹಿಂದೆ ಚಾಲುಕ್ಯ ದೊರೆಗಳ ಪಟ್ಟಾಭಿಷೇಕ ನೆರವೇರುತ್ತಿತ್ತೆಂದು ಹೇಳಲಾಗುತ್ತದೆ.
* ಈ ಕಾಲದ ಅಜಂತ ಕಲೆಯು ಲೋಕ ವಿಖ್ಯಾತವಾದುದು.

Post a Comment

1 Comments