*
ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ವಿದ್ಯಾವಂತ ವರ್ಗವು ಬ್ರಿಟಿಷ್ ಆಳ್ವಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡಿತು.
*
ಬ್ರಿಟಿಷರಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ರೈತಾಪಿಗಳು, ಆದಿವಾಸಿಗಳು ಮತ್ತಿತರ ವರ್ಗಗಳೂ ಸಹ ಬ್ರಿಟಿಷರ
ವಿರುದ್ದ ತೀವ್ರ ಪ್ರತಿಭಟನೆಗಾಗಿ ಮಿಡಿಯುತ್ತಿದ್ದವು.
=>
ರಾಷ್ಟ್ರೀಯತೆಯ ಬೆಳವಣಿಗೆ ಮತ್ತು ಕಾರಣಗಳು :
*
ರಾಷ್ಟ್ರೀಯತೆ ಎಂದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಜನರ ಮನದಲ್ಲಿ ಮೂಡುವ ನಾವೆಲ್ಲರೂ ಒಂದೆ'
ಎಂಬ ಏಕತೆಯ ಭಾವನೆಯಾಗಿದೆ.
* ಭಾರತೀಯರಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ ಕಾರಣ ಸಾ.ಶ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ವಿಫಲಗೊಂಡಿತು. ಇದು ಪ್ರಜ್ಞಾವಂತ ಭಾರತೀಯರಲ್ಲಿ ಸಂಘಟನೆಯ
ಅರಿವನ್ನು ಉಂಟುಮಾಡಿತು.
=> ರಾಷ್ಟ್ರೀಯತೆಯ
ಬೆಳವಣಿಗೆಗೆ ಹಲವು ಅಂಶಗಳು ಪ್ರೇರಣೆ ನೀಡಿದವು. ಅವು ಈ ರೀತಿ ಇವೆ.
1.
ಪಾಶ್ಚಿಮಾತ್ಯ ಶಿಕ್ಷಣ ಮತ್ತು ಆಧುನಿಕ ಜ್ಞಾನ-ವಿಜ್ಞಾನದ ಪರಿಚಯ
2.
ಏಕರೂಪ ಆಡಳಿತಾತ್ಮಕ ವ್ಯವಸ್ಥೆ
3.
ಆಕ ಶೋಷಣೆ
4.
ಪರಂಪರೆಯ ಪರಿಚಯ
5.
ಸಾಮಾಜಿಕ ಧಾರ್ಮಿಕ ಚಳವಳಿಗಳು
6.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿ
7.
ಜನಾಂಗೀಯ ತಾರತಮ್ಯ.
=> ಭಾರತ ರಾಷ್ಟ್ರೀಯ ಕಾಂಗ್ರೆಸ್ (1885) : ಎಲನ್ ಆಕ್ಟೇವಿಯನ್ ಹ್ಯೂಮ್ (ಎ.ಓ.ಹ್ಯೂಮ್)
->
ಸಾ.ಶ. 1885ರಲ್ಲಿ ಭಾ.ರಾ.ಕಾಂ. ಎಲನ್ ಆಕ್ಟೇವಿಯನ್ ಹ್ಯೂಮ್ ರವರಿಂದ - ಮುಂಬೈಯಲ್ಲಿ ಸ್ಥಾಪಿತವಾಯಿತು.
->
ಮುಂಬೈಯಲ್ಲಿ ನಡೆದ - ಮೊದಲ ಅಧಿವೇಶನದ ಅಧ್ಯಕ್ಷ- ಉಮೇಶಚಂದ್ರ ಬ್ಯಾನರ್ಜಿ - ಭಾಗವಹಿಸಿದ್ದ 72 ಮಂದಿ
ಪ್ರತಿನಿಧಿಗಳಲ್ಲಿ ಹೆಚ್ಚಿನವರು ವಕೀಲರು, ಪತ್ರಕರ್ತರು ಮತ್ತು ಸಮಾಜದ ಪ್ರತಿಷ್ಠಿತ ವರ್ಗದವರಾಗಿದ್ದರು.
ವಾಸ್ತವಾಗಿ ಇದು ಕಾಂಗ್ರೆಸ್ ರಾಷ್ಟ್ರೀಯ ಚಳವಳಿಗೆ ಚಾಲನೆ ನೀಡಿದ ಮೊದಲ ರಾಜಕೀಯ ವೇದಿಕೆಯಾಗಿತ್ತು.
=>
ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಉದ್ದೇಶಗಳು:
*
ದೇಶದ ರಾಜಕೀಯ ಕಾರ್ಯಕರ್ತರ ನಡುವೆ ಸ್ನೇಹ ಸಂಬಂಧವನ್ನು ಬೆಸೆಯುವುದು.
*
ರಾಷ್ಟ್ರೀಯ ಏಕತೆ
*
ಜನತೆಯ ಬೇಡಿಕೆಗಳ ಜನಾಭಿಪ್ರಾಯವನ್ನು ರೂಪಿಸುವುದು.
*
ರಾಷ್ಟ್ರೀಯತೆಯನ್ನು ಮೂಡಿಸುವುದು.
0 Comments