● ಸ್ವಾತಂತ್ರ್ಯ ಚಳವಳಿ & ಭಾರತ ರಾಷ್ಟ್ರೀಯ ಕಾಂಗ್ರೇಸ್





* 19ನೇ ಶತಮಾನದ ಉತ್ತರಾರ್ಧದಲ್ಲಿ ರಾಷ್ಟ್ರೀಯತೆಯು ಚಿಗುರೊಡೆಯಿತು.
* ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ವಿದ್ಯಾವಂತ ವರ್ಗವು ಬ್ರಿಟಿಷ್ ಆಳ್ವಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡಿತು.
* ಬ್ರಿಟಿಷರಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ರೈತಾಪಿಗಳು, ಆದಿವಾಸಿಗಳು ಮತ್ತಿತರ ವರ್ಗಗಳೂ ಸಹ ಬ್ರಿಟಿಷರ ವಿರುದ್ದ ತೀವ್ರ ಪ್ರತಿಭಟನೆಗಾಗಿ ಮಿಡಿಯುತ್ತಿದ್ದವು. 

=> ರಾಷ್ಟ್ರೀಯತೆಯ ಬೆಳವಣಿಗೆ ಮತ್ತು ಕಾರಣಗಳು :
* ರಾಷ್ಟ್ರೀಯತೆ ಎಂದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಜನರ ಮನದಲ್ಲಿ ಮೂಡುವ ನಾವೆಲ್ಲರೂ ಒಂದೆ' ಎಂಬ ಏಕತೆಯ ಭಾವನೆಯಾಗಿದೆ.
 * ಭಾರತೀಯರಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ ಕಾರಣ ಸಾ.ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ವಿಫಲಗೊಂಡಿತು. ಇದು ಪ್ರಜ್ಞಾವಂತ ಭಾರತೀಯರಲ್ಲಿ ಸಂಘಟನೆಯ ಅರಿವನ್ನು ಉಂಟುಮಾಡಿತು.



=> ರಾಷ್ಟ್ರೀಯತೆಯ ಬೆಳವಣಿಗೆಗೆ ಹಲವು ಅಂಶಗಳು ಪ್ರೇರಣೆ ನೀಡಿದವು. ಅವು ಈ ರೀತಿ ಇವೆ.
1. ಪಾಶ್ಚಿಮಾತ್ಯ ಶಿಕ್ಷಣ ಮತ್ತು ಆಧುನಿಕ ಜ್ಞಾನ-ವಿಜ್ಞಾನದ ಪರಿಚಯ
2. ಏಕರೂಪ ಆಡಳಿತಾತ್ಮಕ ವ್ಯವಸ್ಥೆ
3. ಆಕ ಶೋಷಣೆ
4. ಪರಂಪರೆಯ ಪರಿಚಯ
5. ಸಾಮಾಜಿಕ ಧಾರ್ಮಿಕ ಚಳವಳಿಗಳು
6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿ
7. ಜನಾಂಗೀಯ ತಾರತಮ್ಯ. 

=> ಭಾರತ ರಾಷ್ಟ್ರೀಯ ಕಾಂಗ್ರೆಸ್ (1885) : ಎಲನ್ ಆಕ್ಟೇವಿಯನ್ ಹ್ಯೂಮ್ (ಎ.ಓ.ಹ್ಯೂಮ್)
-> ಸಾ.ಶ. 1885ರಲ್ಲಿ ಭಾ.ರಾ.ಕಾಂ. ಎಲನ್ ಆಕ್ಟೇವಿಯನ್ ಹ್ಯೂಮ್ ರವರಿಂದ - ಮುಂಬೈಯಲ್ಲಿ ಸ್ಥಾಪಿತವಾಯಿತು.
-> ಮುಂಬೈಯಲ್ಲಿ ನಡೆದ - ಮೊದಲ ಅಧಿವೇಶನದ ಅಧ್ಯಕ್ಷ- ಉಮೇಶಚಂದ್ರ ಬ್ಯಾನರ್ಜಿ - ಭಾಗವಹಿಸಿದ್ದ 72 ಮಂದಿ ಪ್ರತಿನಿಧಿಗಳಲ್ಲಿ ಹೆಚ್ಚಿನವರು ವಕೀಲರು, ಪತ್ರಕರ್ತರು ಮತ್ತು ಸಮಾಜದ ಪ್ರತಿಷ್ಠಿತ ವರ್ಗದವರಾಗಿದ್ದರು. ವಾಸ್ತವಾಗಿ ಇದು ಕಾಂಗ್ರೆಸ್ ರಾಷ್ಟ್ರೀಯ ಚಳವಳಿಗೆ ಚಾಲನೆ ನೀಡಿದ ಮೊದಲ ರಾಜಕೀಯ ವೇದಿಕೆಯಾಗಿತ್ತು.



=> ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಉದ್ದೇಶಗಳು:
* ದೇಶದ ರಾಜಕೀಯ ಕಾರ್ಯಕರ್ತರ ನಡುವೆ ಸ್ನೇಹ ಸಂಬಂಧವನ್ನು ಬೆಸೆಯುವುದು.
* ರಾಷ್ಟ್ರೀಯ ಏಕತೆ
* ಜನತೆಯ ಬೇಡಿಕೆಗಳ ಜನಾಭಿಪ್ರಾಯವನ್ನು ರೂಪಿಸುವುದು.
* ರಾಷ್ಟ್ರೀಯತೆಯನ್ನು ಮೂಡಿಸುವುದು.

Post a Comment

0 Comments