ಮಹಾತ್ಮ
ಗಾಂಧಿ :
*
ಸಾ.ಶ. 1869ರಲ್ಲಿ ಅಕ್ಟೋಬರ್ 2 ರಂದು ಗುಜರಾತಿನ ಪೋರಬಂದರನಲ್ಲಿ ಜನನ.
*
ಅಹಿಂಸೆ ಮತ್ತು ಸತ್ಯಾಗ್ರಹ ನೀತಿಯು ಗಾಂಧೀಜಿಯವರ ಹೋರಾಟದ ಪ್ರಮುಖ ಅಸ್ತ್ರಗಳಾಗಿದ್ದವು.
*
ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಪ್ರಮುಖ ಕೃತಿಗಳೆಂದರೆ-
1)
ಭಗವದ್ಗೀತೆ
2) ಜಾನ್ ರಸ್ಕಿನ್ ನ Unto this Last / ಕೊನೆಯ ತನಕ'
3) ಟಾಲ್ಸ್ ಟಾಯ್ ರವರ - The Kingdom of God is Within You / ನಿನ್ನಂತರಂಗವೇ
ದೇವರ ರಾಜ್ಯ &
4) ಸತ್ಯ ಹರಿಶ್ಚಂದ್ರ ನಾಟಕ.
->
ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿ :
*
ಗಾಂಧೀಜಿಯವರ ಆರಂಭಿಕ ಶಿಕ್ಷಣ ಪೋರಬಂದರಿನಲ್ಲಿ ಹಾಗೂ ಉನ್ನತ ಶಿಕ್ಷಣ ಮತ್ತು ಕಾನೂನು ಪದವಿ-ಇಂಗ್ಲೆಂಡಿನಲ್ಲಾಯಿತು.
*
1891ರಲ್ಲಿ ಭಾರತಕ್ಕೆ ಹಿಂದಿರುಗಿ ರಾಜ್ಕೋಟ್ ಮತ್ತು ಮುಂಬೈಯಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿದರು.
*
ದಾದಾ ಅಬ್ದುಲ್ಲಾ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.
*
ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಕೆಳದರ್ಜೆಯವರಾಗಿ ಬಾಳುವುದನ್ನು ಕಂಡು ಆತಂಕಕ್ಕೊಳಗಾದರು. ಅಲ್ಲಿಯ
`ಬಿಳಿ' ಸರ್ಕಾರದ ಜನಾಂಗೀಯ ನೀತಿಯನ್ನು ವಿರೋಧಿಸಿದರು.
->
ಗಾಂಧೀಜಿಯವರ ಪ್ರಮುಖ ಕೃತಿಗಳು :
1) ಸತ್ಯದೊಂದಿಗೆ ನನ್ನ ಪ್ರಯೋಗಗಳು
2) ಹಿಂದ್ ಸ್ವರಾಜ್
3) ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ.
*
ಸಂಪಾದಕೀಯ ವೃತ್ತಪತ್ರಿಕೆಗಳು
- ಹರಿಜನ ಮತ್ತು
ಯಂಗ್ ಇಂಡಿಯಾ.
->
ಗಾಂಧೀಜಿಯವರ ಆರಂಭಿಕ ರಾಜಕೀಯ ಜೀವನ:
*
1915ರಲ್ಲಿ ದ.ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ 1916ರಲ್ಲಿ ಅಹಮದಾಬಾದ್ ಬಳಿ ಸಬರಮತಿ ಆಶ್ರಮ
ಸ್ಥಾಪನೆ ಮಾಡಿದರು.
*
ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನದ ಮೇರೆಗೆ ಭಾರತದಾದ್ಯಂತ ಪ್ರವಾಸ ಕೈಗೊಂಡರು.
*
ಚಂಪಾರಣ್ ಮತ್ತು ಖೇಡಾಗಳಲ್ಲಿ ರೈತರ ಪರ ಹೋರಾಟ ನಡೆಸಿದರು.
->
1917ರ ಬಿಹಾರದ ಚಂಪಾರಣ್ ಹೋರಾಟ :
ನೀಲಿ ಬೆಳೆಯುವಂತೆ ಒತ್ತಾಯಿಸಿದ ಪ್ಲಾಂಟರ್ ಗಳ ವಿರುದ್ಧ ಚಂಪಾರಣ್
ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲಿಸಿ ಚಂಪಾರಣ್ ಸತ್ಯಾಗ್ರಹ ಕೈಗೊಂಡರು.
*
ಚಂಪಾರಣ್ ಚಳವಳಿಯ ಮೂಲಕ ನಾಯಕರಾಗಿ ಹೊಮ್ಮಿದವರು - ಬಾಬು ರಾಜೇಂದ್ರ ಪ್ರಸಾದ್.
->
1918ರ ಗುಜರಾತಿನ ಖೇಡಾ ರೈತ ಹೋರಾಟ:
*
ಬೆಳೆಗಳು ವಿಫಲವಾಗಿ ಆಕವಾಗಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ- ಖೇಡಾ ರೈತರು ಕಂದಾಯ ಕಟ್ಟುವುದರಿಂದ
ತಮಗೆ ವಿನಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದರು. ಸರ್ಕಾರವು ಮನವಿಯನ್ನು ತಿರಸ್ಕರಿಸಿ ಕಂದಾಯ ಸಂಗ್ರಹಣೆಗೆ
ಒತ್ತಾಯಿಸಿತು. ಇದರ ವಿರುದ್ಧದ ರೈತರ ಹೋರಾಟಕ್ಕೆ ಗಾಂಧೀಜಿ ಪೂರ್ಣ ಬೆಂಬಲ ನೀಡಿದರು.
*
ಖೇಡಾ ರೈತ ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದ ನಾಯಕ- ಸರದಾರ ವಲ್ಲಭಭಾಯಿ ಪಟೇಲರು.
->1919ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ /ರಾಜಕೀಯ
ರಂಗಕ್ಕೆ ಗಾಂಧೀಜಿಯವರ ಪ್ರವೇಶ :
*
1919ರಲ್ಲಿ ರೌಲಟ್ ಕಾಯಿದೆಯ ಜಾರಿ ಮತ್ತು ಜಲಿಯನ್ ವಾಲಾಬಾಗ್ನ ಘೋರ ಹಿಂಸಾಕೃತ್ಯದ ವಿರುದ್ಧ ಚಳವಳಿ
ಹೂಡುವ ಮೂಲಕ ಗಾಂಧಿಜಿಯವರು ಭಾರತದ ರಾಜಕೀಯ ರಂಗವನ್ನು ಪ್ರವೇಶಿಸಿದರು.
->
1919ರ ಖಿಲಾಫತ್ ಚಳವಳಿ : ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ
*
ಜಗತ್ತಿನ ಎಲ್ಲಾ ಮುಸಲ್ಮಾನರ ಪರಮೋಚ್ಛ ಧಾರ್ಮಿಕ ಮುಖಂಡರು - ಟರ್ಕಿಯ ಖಲೀಫ.
*
1ನೇ ಮಹಾಯುದ್ಧದಲ್ಲಿ ಟರ್ಕಿಯು ಬ್ರಿಟನ್ ವಿರುದ್ಧ ನಿಂತು ಸೋತ ಪರಿಣಾಮ-ಟರ್ಕಿಯ ಭಾಗವಾಗಿದ್ದ ಅರೇಬಿಯಾ,
ಜೋರ್ಡಾನ್, ಇರಾಕ್ ಇತ್ಯಾದಿ ಸ್ವತಂತ್ರ ರಾಜ್ಯಗಳಾದವು.
*
1919ರಲ್ಲಿ ಟರ್ಕಿಯ ಖಲೀಫರ ಅರಸೊತ್ತಿಗೆಯನ್ನು ಮೂಲೆಗೊತ್ತಿ ಅಧಿಕಾರಕ್ಕೇರಿದ ಕಮಾಲ್ ಪಾಷಾ ಕುರಿತು
ಭಾರತೀಯ ಮುಸ್ಲಿಮರು ಖಲೀಫರ ಪರವಾಗಿಯೂ ಮತ್ತು ಬ್ರಿಟನಿನ ವಿರುದ್ಧವಾಗಿಯೂ ನಡೆಸಿದ ಆಂದೋಲನವೇ ಖಿಲಾಫತ್
'ಚಳವಳಿ'.
*
ಗಾಂಧೀಜಿಯವರು ಖಿಲಾಫತ್ ಚಳವಳಿಯ ನಾಯಕತ್ವ ವಹಿಸಿದರು.
*
ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ ಸಹೋದರರು ಈ ಚಳವಳಿಯ ಪ್ರಮುಖ ನಾಯಕರಾಗಿದ್ದರು.
0 Comments