* ಭಾರತ ಸ್ವಾತಂತ್ರ್ಯ ಚಳುವಳಿ - ನೆನಪಿಡಬೇಕಾದ ಮುಖ್ಯಾಂಶಗಳು

 
* ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ತುರ್ತಾಗಿ ದೊರಕಿಸುವುದು `ಕ್ರಾಂತಿಕಾರಿ ರಾಷ್ಟ್ರೀಯವಾದಿಗಳ' ಧ್ಯೇಯವಾಗಿತ್ತು.
* ಮೊದಲ ಬಾರಿಗೆ ಕ್ರಾಂತಿಕಾರಿ ರಹಸ್ಯ ಸಂಟನೆಯನ್ನು ರೂಪಿಸಿದವರು - ವಾಸುದೇವ ಬಲವಂತ ಫಡ್ಕೆ. 
* ದಾಮೋದರ ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು ರಹಸ್ಯ ಸಂಘಟನೆಯ ಜೀವನಾಡಿಗಳಾಗಿದ್ದರು. ಇವರಿಬ್ಬರನ್ನೂ ಬಂಧಿಸಿ ಗಲ್ಲಿಗೇರಿಸಲಾಯಿತು. 

* 1899ರಲ್ಲಿ ವಿ.ಡಿ. ಸಾವರ್ಕರ್ ರವರು `ಮಿತ್ರಮೇಳ' ಎನ್ನುವ ಪ್ರಥಮ ಗುಪ್ತ ಸಂಟನೆಯನ್ನು ಕಟ್ಟಿದರು.-ಇವರಿಗೆ ಬ್ರಿಟಿಷ್ ಸರ್ಕಾರ ಜೀವಾವಧಿ ಕಾರಾಗೃಹವಾಸವನ್ನು ವಿಧಿಸಿ ಅಂಡಮಾನ್ ಜೈಲಿಗೆ ರವಾನಿಸಿತು - ಅಂಡಮಾನ್ ಜೈಲಿನಲ್ಲಿ ಭಾರತ ಸರ್ಕಾರ ಸಾವರ್ಕರ್ ರವರ ಸ್ಮಾರಕವನ್ನು ನಿರ್ಮಿಸಿದೆ.
* 1908ರಲ್ಲಿ- ಸ್ವಾತಂತ್ರ್ಯ ಹೋರಾಟದಲ್ಲಿ ನೇಣುಗಂಬ ಏರಿದ ಭಾರತದ ಮೊದಲ ಹುತಾತ್ಮ - 19ವರ್ಷದ ಖುದಿರಾಮ್ ಭೋಸ್.

=> ಚಂದ್ರಶೇಖರ ಆಜಾದ್:
`ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್'ಗೆ ಸೇರಿದ್ದ ಇವರು -  ಕಾಕೋರಿ ಪಿತೂರಿ, ಶಾಸನ ಸಭೆಯ ಬಾಂಬ್ ಘಟನೆ ಹಾಗೂ ಲಾಹೋರಿನಲ್ಲಿ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ನ ಮೇಲೆ ಗುಂಡಿನ ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಳ್ಳಲು ಏಕಾಂಗಿ ಹೋರಾಟ ನಡೆಸಿ, ಕೇವಲ ಒಂದು ಗುಂಡು ಉಳಿದಿದ್ದಾಗ ತನ್ನ ಕಪೋಲಕ್ಕೆ ಗುರಿಯಿಟ್ಟು ಹಾರಿಸಿಕೊಂಡು, ತಾನು ಬಂಧನಕ್ಕೊಳಗಾಗುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನು ಆಜಾದ್ ಉಳಿಸಿಕೊಂಡರು.


* ಭಗತ್ ಸಿಂಗ್ : ಹಿಂದೂಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಸಂಟನೆಯ ಪ್ರಧಾನ ಕಾರ್ಯದರ್ಶಿ ಮತ್ತು "ಇಂಕ್ವಿಲಾಬ್ ಜಿಂದಾಬಾದ್ / ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆ ಮಾಡಿದ ಮೊದಲ ಭಾರತೀಯ.

* ದಿಲ್ಲಿಯ ಕೇಂದ್ರೀಯ ಶಾಸನಸಭೆಯ ಮೇಲೆ ಬಾಂಬ್ ಎಸೆದ ಪ್ರಕರಣದಲ್ಲಿ 1929ರಲ್ಲಿ - ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರನ್ನು - ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.


* ಪ್ರಮುಖ ಕ್ರಾಂತಿಕಾರಿ ನಾಯಕರು
ಖುದಿರಾಮ್ ಬೋಸ್, ವಿನಾಯಕ ದಾಮೋದರ ಸಾವರ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ವಾಸುದೇವ್ ಬಲವಂತ್ ಫಡ್ಕೆ, ದಾಮೋದರ್ ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು.

Post a Comment

0 Comments