ಪ್ರತ್ಯಯಗಳು/ವಿಭಕ್ತಿ ಪ್ರತ್ಯಯಗಳು
ಪ್ರತ್ಯಯಗಳು ನಾಮಪ್ರಕೃತಿಗೆ (ಮೂಲ ಪದಕ್ಕೆ) ನಿರ್ದಿಷ್ಟ ಅರ್ಥ ಬರುವಂತೆ ಮಾಡುತ್ತವೆ. ಪ್ರತ್ಯಯಗಳನ್ನು ಸ್ವತಂತ್ರವಾಗಿ ಬಳಸಲು ಬರುವುದಿಲ್ಲ. ಹಾಗೆ ಬಳಸಿದರೆ ಅರ್ಥವೂ ಬರುವುದಿಲ್ಲ. ವಾಕ್ಯ ರಚನೆಯ ಸಂದರ್ಭದಲ್ಲಿ ನಾಮಪ್ರಕೃತಿಗಳು ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು. ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ.
‘ಮನೆ’ ಎಂಬುದು ನಾಮಪದದ ಮೂಲರೂಪ. ಇದನ್ನು ನಾಮಪ್ರಕೃತಿ ಎನ್ನುವರು. ಈ ನಾಮಪ್ರಕೃತಿಗೆ ಪ್ರತ್ಯಯಗಳು ಸೇರಿದಾಗ ‘ಪದ’ ಆಗುತ್ತದೆ.
ಉದಾ : ಮನೆ + ಉ = ಮನೆಯು, ಮನೆ + ಅಲ್ಲಿ = ಮನೆಯಲ್ಲಿ
ಒಟ್ಟು 07 ವಿಭಕ್ತಿ ಪ್ರತ್ಯಯಗಳು ಇವೆ.
ಕ್ರ.ಸಂ. ವಿಭಕ್ತಿ ಪ್ರತ್ಯಯ
1. ಪ್ರಥಮಾ - ಉ
2. ದ್ವಿತೀಯಾ - ಅನ್ನು
3. ತೃತೀಯಾ - ಇಂದ
4. ಚತುರ್ಥಿ - ಗೆ, ಇಗೆ, ಕ್ಕೆ
5. ಪಂಚಮೀ - ದೆಸೆಯಿಂದ
6. ಷಷ್ಠೀ - ಅ
7. ಸಪ್ತಮೀ - ಅಲ್ಲಿ
ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಏನಾಗುವುದು ಎಂಬುದನ್ನು ಗಮನಿಸೋಣ.
ನಾಮಪ್ರಕೃತಿ ವಿಭಕ್ತಿ ಪ್ರತ್ಯಯ ಪದ
ರಾಜ ಉ ರಾಜನು
ರಾಜ ಅನ್ನು ರಾಜನನ್ನು
ರಾಜ ಇಂದ ರಾಜನಿಂದ
ರಾಜ ಗೆ, ಇಗೆ, ಕ್ಕೆ ರಾಜನಿಗೆ
ರಾಜ ದೆಸೆಯಿಂದ ರಾಜನ ದೆಸೆಯಿಂದ
ರಾಜ ಅ ರಾಜನ
ರಾಜ ಅಲ್ಲಿ ರಾಜನಲ್ಲಿ
>ಈ ವಾಕ್ಯವನ್ನು ಗಮನಿಸಿ:
“ಭೀಮನು
ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು.”
ಈ ವಾಕ್ಯದಲ್ಲಿ ಭೀಮ, ತಾನು, ಬಲಗಾಲು, ಚೆಂಡು ಎಂಬ ಪದಗಳು ನಾಮಪ್ರಕೃತಿಗಳಾಗಿವೆ. ಈ ನಾಮಪ್ರಕೃತಿಗಳನ್ನು ಮಾತ್ರ ಹೇಳಿ ‘ಒದೆದನು’ ಎಂಬ ಕ್ರಿಯಾಪದವನ್ನು ಹೇಳಿದರೆ ಅರ್ಥ ಸ್ಪಷ್ಟವಾಗುವುದಿಲ್ಲ. (ಭೀಮ ತಾನು ಬಲಗಾಲು ಚೆಂಡು ಒದೆದನು ಎಂದು ಹೇಳಿದ್ದರೆ) ಈ ಎಲ್ಲಾ ನಾಮ ಪ್ರಕೃತಿಗಳಿಗೆ ಕಾರಕಾರ್ಥಕ್ಕೆ ಅನುಗುಣವಾಗಿ ಪ್ರತ್ಯಯಗಳನ್ನು ಸೇರಿಸಿದಾಗ ವಾಕ್ಯವು ಅರ್ಥಪೂರ್ಣವಾಗುತ್ತದೆ. ‘ಭೀಮ’ ಎಂಬ ಪದಕ್ಕೆ ‘ಕರ್ತ್ರರ್ಥ’ದಲ್ಲಿ
‘ಉ’ ಎಂಬ ಪ್ರತ್ಯಯವನ್ನೂ ‘ತಾನು’ ಎಂಬ ಸರ್ವನಾಮಕ್ಕೆ ‘ಸಂಬಂಧಾರ್ಥಕ’ದಲ್ಲಿ ‘ಅ’ ಎಂಬ ಪ್ರತ್ಯಯವನ್ನೂ, ‘ಚೆಂಡು’ ಎಂಬ ಪದಕ್ಕೆ ‘ಕರ್ಮಾರ್ಥ”ದಲ್ಲಿ ‘ಅನ್ನು’ ಎಂಬ ಪ್ರತ್ಯಯವನ್ನೂ ‘ಬಲಗಾಲು’ ಎಂಬ ಪದಕ್ಕೆ ‘ಕರಣಾರ್ಥ’ದಲ್ಲಿ ‘ಇಂದ’ ಎಂಬ ಪ್ರತ್ಯಯವನ್ನೂ ಸೇರಿಸಿ ‘ಒದೆದನು’ ಎಂಬ ‘ಕ್ರಿಯಾಪದ’ವನ್ನು ಸೇರಿಸಿದಾಗ - ‘ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು’ ಎಂಬ ಅರ್ಥಪೂರ್ಣವಾದ ವಾಕ್ಯದ ರಚನೆಯಾಗುತ್ತದೆ.
ಹೀಗೆ ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಅಧಿಕರಣಾದಿಕಾರಕಾರ್ಥಗಳನ್ನು ಹೊಂದಿರುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು. ಈ ವಿಭಕ್ತಿ ಪ್ರತ್ಯಯಗಳು ಹಳಗನ್ನಡ ಮತ್ತು ಹೊಸಗನ್ನಡದಲ್ಲಿ ಯಾವ ರೂಪದಲ್ಲಿವೆ ಎಂಬುದನ್ನು ನೋಡೋಣ.
ವಿಭಕ್ತಿ - ಕಾರಕಾರ್ಥ - ಹೊಸಗನ್ನಡ ಪ್ರತ್ಯಯ - ರೂಪ - ಹಳಗನ್ನಡ - ಪ್ರತ್ಯಯ ರೂಪ
1.ಪ್ರಥಮಾ - ಕರ್ತ್ರಾರ್ಥ - ಉ - ಸಾವಿತ್ರಿಯು - ಮ್ - ಸಾವಿತ್ರಿಯುಮ್
2.ದ್ವಿತೀಯಾ - ಕರ್ಮಾರ್ಥ - ಅನ್ನು - ಸಾವಿತ್ರಿಯನ್ನು - ಅಂ - ಸಾವಿತ್ರಿಯಂ
3.ತೃತೀಯಾ - ಕರಣಾರ್ಥ - ಇಂದ - ಸಾವಿತ್ರಿಯಿಂದ - ಇಂ,ಇಂದ, ಇಂದೆ- ಸಾವಿತ್ರಿಯಿಂ
4.ಚತುರ್ಥೀ - ಸಂಪ್ರದಾನ - ಗೆ, ಇಗೆ, ಕ್ಕೆ - ಸಾವಿತ್ರಿ - ಗೆ ಗೆ, ಕೆ, ಕ್ಕೆ - ಸಾವಿತ್ರಿಂಗೆ
5.ಪಂಚಮೀ - ಅಪಾದಾನ - ದೆಸೆಯಿಂದ - ಸಾವಿತ್ರಿಯ ದೆಸೆಯಿಂದ - ಅತ್ತಣಿಂ, ಅತ್ತಣಿಂದ - ಸಾವಿತ್ರಿಯತ್ತಣಿಂ
6.ಷಷ್ಠೀ - ಸಂಬಂಧ - ಅ - ಸಾವಿತ್ರಿಯ - ಅ - ಸಾವಿತ್ರಿಯ
7.ಸಪ್ತಮೀ - ಅಧಿಕರಣ - ಅಲ್ಲಿ - ಸಾವಿತ್ರಿಯಲ್ಲಿ - ಒಳ್ - ಸಾವಿತ್ರಿಯೊಳ್
ವಿಭಕ್ತಿ ಪಲ್ಲಟ :
ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು.
ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ವಿಭಕ್ತಿ ಪಲ್ಲಟ’ ಎಂದು ಹೇಳುತ್ತೇವೆ.
ದ್ವಿತೀಯಾ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
* ಊರನ್ನು ಸೇರಿದನು (ದ್ವಿತೀಯಾ)
* ಊರಿಗೆ ಸೇರಿದನು (ಚತುರ್ಥೀ)
* ಬೆಟ್ಟವನ್ನು ಹತ್ತಿದನು (ದ್ವಿತೀಯಾ)
* ಬೆಟ್ಟಕ್ಕೆ ಹತ್ತಿದನು. (ಚತುರ್ಥೀ)
ಪಂಚಮೀ ಬದಲಿಗೆ ತೃತೀಯಾ ವಿಭಕ್ತಿ ಸೇರಿದಾಗ -
* ಮರದ ದೆಸೆಯಿಂದ ಹಣ್ಣು ಬಿತ್ತು (ಪಂಚಮೀ)
* ಮರದಿಂದ ಹಣ್ಣು ಬಿತ್ತು (ತೃತೀಯಾ)
* ಕೌರವನ ದೆಸೆಯಿಂದ ಕೇಡಾಯ್ತು (ಪಂಚಮೀ)
* ಕೌರವನಿಂದ ಕೇಡಾಯ್ತು (ತೃತೀಯಾ)
ಷಷ್ಠೀ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ-
* ನಮ್ಮ ಚಿಕ್ಕಪ್ಪ (ಷಷ್ಠೀ)
* ನಮಗೆ ಚಿಕ್ಕಪ್ಪ (ಚತುರ್ಥೀ)
* ಅಯೋಧ್ಯೆಯ ರಾಜ (ಷಷ್ಠೀ)
* ಅಯೋಧ್ಯೆಗೆ ರಾಜ (ಚತುರ್ಥೀ)
(ಮುಂದುವರೆಯುವುದು……)
ಮೇಲೆ ವಿವರಿಸಿದ ಸಂಗತಿಗಳನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ತಲೆಬರಹ: ವಿಭಕ್ತಿ ಪ್ರತ್ಯಯಗಳು & ವಿಭಕ್ತಿ ಪಲ್ಲಟ
ಕಡತದ
ಭಾಷೆ : ಕನ್ನಡ
ಇಲಾಖೆ
: ಶಿಕ್ಷಣ ಇಲಾಖೆ
ರಾಜ್ಯ:
ಕರ್ನಾಟಕ
ಪ್ರಕಟಿಸಿದ
ದಿನಾಂಕ : 20-06-2022
ಫೈಲ್
ಫಾರ್ಮ್ಯಾಟ್ : ಪಿಡಿಎಫ್/ಜೆಪಿಜೆ/ಟೆಕ್ಸ್ಟ್
ಫೈಲ್
ಗಾತ್ರ : 1.0 ಎಂ.ಬಿ.
ಪುಟಗಳ
ಸಂಖ್ಯೆ : 3
ಡೌನ್ಲೋಡ್
ಲಿಂಕ್ : ಇದೆ
ವೆಬ್ಸೈಟ್
ಲಿಂಕ್ : ಇಲ್ಲ
ಸ್ಕ್ಯಾನ್
ಮಾಡಿದ ಪ್ರತಿ : ಅಲ್ಲ
ಸಂಪಾದಿಸಬಹುದಾದ
ಪಠ್ಯ : ಇಲ್ಲ
ನಕಲು
ಪಠ್ಯ : ಅಲ್ಲ
ಮುದ್ರಣ
: ಲಭ್ಯವಿದೆ
ಗುಣಮಟ್ಟ
: ಅತ್ಯುತ್ತಮ
ಫೈಲ್
ಗಾತ್ರ ಕಡಿಮೆಯಾಗಿದೆ : ಇಲ್ಲ
ಗುಪ್ತಪದ
: ಇಲ್ಲ
ಪಾಸ್ವರ್ಡ್
ಎನ್ಕ್ರಿಪ್ಟ್ : ಇಲ್ಲ
ಇಮೇಜ್
ಫೈಲ್ ಲಭ್ಯತೆ : ಇದೆ
ಫೈಲ್ ನ ವೆಚ್ಚ/ಮೌಲ್ಯ : ಸಂಪೂರ್ಣ ಉಚಿತ
0 Comments